23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಜ್ಮೀರ್ ಖಾಜಾ ಸಂಸ್ಮರಣೆ; ಸರ್ವಧರ್ಮೀಯ ಐದು ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ: ಅಜ್ಮೀರ್ ಖಾಜಾ ಅವರ ಉರೂಸ್ ಕಾರ್ಯಕ್ರಮ ಇಸ್ಲಾಮಿಕ್ ಮಾಸದ ‘ರಜಬ್’ ಈ ತಿಂಗಳಲ್ಲಿ ನಡೆದಿದ್ದು, ಖಾಜಾ ಅವರ ಸಂಸ್ಮರಣಾರ್ಥ ಉದ್ಯಮಿಯೊಬ್ಬರು ಐವರು ಸರ್ವಧರ್ಮೀಯ ಕುಟುಂಬಗಳಿಗೆ ಆಹಾರದ ಕಿಟ್ ಹಂಚುವ ಮೂಲಕ ಮಾದರಿಯಾಗಿದ್ದಾರೆ.

ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆಯವರ ಸಹಕಾರದೊಂದಿಗೆ, ಯುವ ಉದ್ಯಮಿ ಹಾಗೂ ಸಾಮಾಜಿಕ ಸಂಘಟಕ, ಕೊಡುಗೈ ದಾನಿ ಹಾಜಿ ಶಮೀಮ್ ಯೂಸುಫ್ ಮದ್ದಡ್ಕ ಅವರೇ ಈ ಮಾದರಿ ಕಾರ್ಯ ಮಾಡಿದವರು.

ಎಳೆಯ ಮಗುವಿನ ಲಿವರ್ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಕಡಿರುದ್ಯಾವರದ ಹಿಂದೂ ಕುಟುಂಬವೊಂದಕ್ಕೆ, ಉಳಿದಂತೆ ವಿಕಲಚೇತನರಾಗಿ ಮಲಗಿದಲ್ಲೇ ಇರುವ ಬೆಳ್ತಂಗಡಿ ಸಂಜಯ ನಗರದ ಕುಟುಂಬವೊಂದಕ್ಕೆ, ಮೇಲಂತಬೆಟ್ಟು ಗ್ರಾಮದ ಇಬ್ಬರು ವಿಧವೆಯರು ಹಾಗೂ ಕೂಲಿ ಕೆಲಸಕ್ಕೆ ತೆರಳುತ್ತಿರುವ ಮುಸ್ಲಿಂ ಕುಟುಂಬಕ್ಕೆ ಶಮೀಮ್ ಅವರು ರೇಷನ್ ಕಿಟ್ ಹಸ್ತಾಂತರಿಸಿದರು.

Related posts

ನಯನಾಡು ಸರಕಾರಿ ಪ್ರೌಢಶಾಲೆಗೆ ಸತತ 6ನೇ ಬಾರಿಗೆ ಶೇ.100 ಫಲಿತಾಂಶ

Suddi Udaya

ಕೊಕ್ಕಡ ಪರಿಸರದಲ್ಲಿಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

Suddi Udaya

ನಾರಾಯಣ ಅಭ್ಯಂಕರ್ ನಿಧನ

Suddi Udaya

ಮುಂಡಾಜೆ ಪ್ರೌಢ ಶಾಲೆಯಲ್ಲಿ1994-95 ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಕೂಟ

Suddi Udaya

ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭ

Suddi Udaya

ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಶಾರದಾ ಮಾತೆಯ ವಿಗ್ರಹ ಪಿಠಾರ್ಪಣೆ

Suddi Udaya
error: Content is protected !!