ಬೆಳ್ತಂಗಡಿ : ವಿಕಲಚೇತನ ವ್ಯಕ್ತಿಯನ್ನು ಮನೆಯವರು ಎತ್ತಿಕೊಂಡು ಮತಗಟ್ಟೆಗೆ ಹೋಗಿ ಮತ ಚಲಾವಣೆ

Suddi Udaya

ಬೆಳ್ತಂಗಡಿ; ಚುನಾವಣಾ ಆಯೋಗ ಸರಕಾರ ವಿಕಲಚೇತನರಿಗೆ ಮನೆಯಲ್ಲಿಯೇ ಮತದಾನ ಮಾಡುವ ಅವಕಾಶ ನೀಡಿದೆ ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬೆಳ್ತಂಗಡಿ ನಗರದಲ್ಲಿ ವಿಕಲಚೇತನ ವ್ಯಕ್ತಿಯನ್ನು ಮನೆಯವರು ಎತ್ತಿಕೊಂಡು ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕಾಗಿ ಬಂತು.


ಬೆಳ್ತಂಗಡಿ ನಗರದ ನಿವಾಸಿ ಬಿ.ಎ ಮೊಹಮ್ಮದ್ ಅವರು ಎಂಡೋ ಸಲ್ಫಾನ್ ಸಂತ್ರಸ್ತರು, ಎದ್ದು ನಡೆಯಲು ಶಕ್ತಿಯಿಲ್ಲದ 30ವರ್ಷ ಪ್ರಾಯದ ಇವರು ಚಾಪೆಹಿಡಿದು ಮಲಗಿದ್ದಲ್ಲಿಯೇ ಇದ್ದಾರೆ. ಹಿಂದೆಲ್ಲ ಇವರನ್ನು ಅವರ ತಂದೆಯೇವರೇ ಎತ್ತಿಕೊಂಡು ಹೋಗಿ ಮತಚಲಾಯಿಸುತ್ತಿದ್ದರು. ಅವರಿಗೆ ಒಂದೂವರೆ ವರ್ಷದ ಹಿಂದೆ ನಡೆದ ಅಪಘಾತದ ಬಳಿಕ ಅವರಿಗೇ ನಡೆಯಲು ಕಷ್ಟವಾಗಿದೆ. ಎಂಡೋ ಪೀಡಿತರಾಗಿರುವ ಇವರ ಹೆಸರನ್ನು ವಿಕಲಚೇತನರ ಪಟ್ಟಿಯಲ್ಲಿ ಸೇರಿಸಿ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ನೀಡಬೇಕು ಎಂದು ಪಟ್ಟಣ ಪಂಚಾಯತಿನ ವಿಕಲಚೇತನರ ಪುನರ್ವಸತಿ ವಿಭಾಗದಿಂದ ಕಂದಾಯ ಇಲಾಖೆಗೆ ಪಟ್ಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ ಕಂದಾಯ ಇಲಾಖೆ ಈ ಬಗ್ಗೆ ಗಮನಹರಿಸಿಲ್ಲ. ಆ ಕಾರಣಕ್ಕಾಗಿ ಈ ಬಾರಿಯ ಚುನಾವಣೆಯಲ್ಲೂ ಅವರ ಹೆಸರು ವಿಕಲಚೇತನ ಮತದಾದರರ ಪಟ್ಟಿಯಲ್ಲಿ(ಪಿಡಬ್ಕ್ಯುಡಿ) ನಾಪತ್ತೆಯಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯತಿನಲ್ಲಿ ವಿಚಾರಿಸಿದರೆ ನಾವು ಕಳುಹಿಸಿದ್ದೇವೆ ಆದರೆ ಎಂಟ್ರಿ ಆಗಿಲ್ಲ ಎಂಬ ಉತ್ತರ ಬರುತ್ತಿದೆ.
ಇಂದು ಬಿ.ಎ.ಮೊಹಮ್ಮದ್ ಅವರನ್ನು ಅವರ ಸಂಬಂಧಿಕರೇ ಎತ್ತಿಕೊಂಡು ಬೆಳ್ತಂಗಡಿ ಮಾದರಿ ಶಾಲೆಯ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದರು. ಅಧಿಕಾರಿಗಳ ನಿರ್ಲಕ್ಷ್ಯದ ನಡುವೆಯೂ ವಿಕಲ ಚೇತನರಾಗಿರುವ ಇವರು ತಮ್ಮ ಮತದಾನದ ಹಕ್ಕನ್ನು ಸಮರ್ಪಕ ವಾಗಿ ಚಲಾಯಿಸಿದ್ದಾರೆ.

Leave a Comment

error: Content is protected !!