July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕ

ಧರ್ಮಸ್ಥಳದಲ್ಲಿ 52ನೇ ವರ್ಷದ ಉಚಿತ ಸಾಮೂಹಿಕ ವಿವಾಹ -123 ಜೋಡಿ ಸತಿ-ಪತಿಗಳಾಗಿ ಗೃಹಸ್ಥಾಶ್ರಮಕ್ಕೆ ಪ್ರವೇಶ -52 ವಷ೯ಗಳಲ್ಲಿ ಒಟ್ಟು 12,900 ಮಂದಿಯ ವಿವಾಹ

ಧರ್ಮಸ್ಥಳ : ನಾಡಿನ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 1 ರಂದು ಸಂಜೆ 6.45ರ ಗೋಧೂಳಿ ಲಗ್ನ ಸುಮೂರ್ಹದಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ವೇದ ಘೋಷ ಮಂತ್ರ ಪಠಣದೊಂದಿಗೆ ನಡೆದ 52ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 123ಜೋಡಿ ಸತಿ-ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.

ಒಟ್ಟು 52 ವಷ೯ಗಳಲ್ಲಿ 12,900 ಮಂದಿ ಧಮ೯ಸ್ಥಳದ ಸಾಮೂಹಿಕ ವಿವಾಹ ದಲ್ಲಿ ವಿವಾಹವಾಗಿವಾಗಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಬೆಳಿಗ್ಗೆ ಡಾ. ಹೆಗ್ಗಡೆಯವರು ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಕಣ ವಿತರಿಸಿದರು. ಸಂಜೆ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾ ಭವನಕ್ಕೆ ಮೆರವಣಿಗೆಯಲ್ಲಿ ಆಗಮಿಸಿದರು. ಅಲ್ಲಿ ಡಾ. ಹೆಗ್ಗಡೆ ದಂಪತಿಗಳು, ಖ್ಯಾತ ಕನ್ನಡ ಚಲನ ಚಿತ್ರ ನಟ ದೊಡ್ಡಣ್ಣ, ಹೇಮಾವತಿ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್ , ಸುಪ್ರಿಯಾ ಹಷೇ೯ಂದ್ರ ಕುಮಾರ್ , ಶ್ರೀಮತಿ ಶಾಂತಾ ದೊಡ್ಡಣ್ಣ ಮತ್ತು ಅತಿಥಿಗಣ್ಯರು ವಧುವಿಗೆ ಮಂಗಳ ಸೂತ್ರ ವಿತರಿಸಿ, ಆಯಾ ಜಾತಿ-ಸಂಪ್ರದಾಯದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಧು-ವರರು ಗೃಹಸ್ಥಾಶ್ರಮಕ್ಕೆ ಪ್ರವೇಶಿಸಿದರು.

12,900ನೇ ವಿಶೇಷ ಜೋಡಿ : ವಿಕಲಾಂಗ ಪ್ರವೀಣ್ ಖನ್ನೂರು ಮತ್ತು ಕವಿತಾ ಗಿಡ್ಡ ಕೆಂಚಣ್ಣನವರ್ ಅವರು ಸಾಮೂಹಿಕ ವಿವಾಹದಲ್ಲಿ ಮದುವೆಯಾದ 12,900ನೇ ಜೋಡಿಯಾಗಿ ವಿಶೇಷವಾಗಿ ಗಮನಸೆಳೆದರು. ಈ ವಧು-ವರರಿಗೆ ವಿಶೇಷ ವೇದಿಕೆಯನ್ನು ಕಲ್ಪಿಸಲಾಗಿತ್ತು.

55 ಮಂದಿ ಖಾಸಗಿ ಉದ್ಯೋಗಿಗಳು;ಮದುವೆ ಆದವರಲ್ಲಿ 55 ಮಂದಿ ಖಾಸಗಿ ಉದ್ಯೋಗಿಗಳು, 26 ಮಂದಿ ಕೂಲಿ, 17 ಮಂದಿ ಬೇಸಾಯ, 8 ಮಂದಿ ವ್ಯಾಪಾರ, 10 ಮಂದಿ ಚಾಲಕ, 3 ಮಂದಿ ಖಾಸಗಿ ಉದ್ಯೋಗಿಗಳು, 3 ಮಂದಿ ಮರದ ಕೆಲಸ, ಒಬ್ಬರು ಮೀನುಗಾರಿಕೆ ವಿವಧ ವೃತ್ತಿಯವರು ಸೇರಿದ್ದಾರೆ.ಬೆಳ್ತಂಗಡಿ ತಾಲೂಕಿನ 5 ಮಂದಿ: ಬೆಳ್ತಂಗಡಿ ತಾಲೂಕಿನ 5, ಮಂಗಳೂರು 3, ಸುಳ್ಯ 1, ಉಡುಪಿ 7, ಚಿಕ್ಕಮಗಳೂರು 6, ಶಿವಮೊಗ್ಗ 13, ಹಾಸನ 7, ಬೆಂಗಳೂರು 12, ಮೈಸೂರು 10, ಹಾವೇರಿ 6, ದಾವಣಗೆರೆ 9, ಧಾರವಾಡ 6, ಉತ್ತರ ಕನ್ನಡ 9, ಚಿತ್ರದುರ್ಗ 3, ಮಂಡ್ಯ ಮತ್ತು ರಾಮನಗರ, ಬಳ್ಳಾರಿ ತಲಾ 4 , ಚಾಮರಾಜನಗರ 2, ತುಮಕೂರು 3, ಬೆಳಗಾವಿ, ಗದಗ ತಲಾ 2, ವಿಜಯನಗರ, ವಿಜಯಪುರ, ಕೋಲಾರ, ಬಾಗಲಕೋಟೆ ತಲಾ 1, ತಮಿಳುನಾಡು 1 ಮದುವೆ ಆದವರಲ್ಲಿ ಒಳಗೊಂಡಿದ್ದಾರೆ.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ ನೂತನ ವಧು ವರದಿಗೆ ಶುಭ ಹಾರೈಸಿದರು.

ಪರಸ್ಪರ ಪ್ರೀತಿ-ವಿಶ್ವಾಸ ನಂಬಿಕೆ ಮುಖ್ಯ : ಡಾ. ಹೆಗ್ಗಡೆ

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಿವಾಹ ಯಾವುದೇ ಒತ್ತಡ ಇಲ್ಲದೆ ಸಂತೋಷ, ಪ್ರೀತಿಯಿಂದ ಎಲ್ಲರೂ ಒಟ್ಟು ಸೇರಿ ಮಾಡುವ ಕಾರ್ಯಕ್ರಮ. ಇದು ಎರಡು ಪವಿತ್ರ ಆತ್ಮಗಳ ಸಮ್ಮೀಳನ, ಇಂದು ಜಾತಿ, ಮತ, ಸಂಪ್ರಾದಾಯದ ಎಲ್ಲೆಯನ್ನು ಮೀರಿ ಇಲ್ಲಿ ವಿವಾಹ ನಡೆದಿದೆ. ಪರಸ್ಪರ ಪ್ರೀತಿ, ವಿಶ್ವಾಸ ನಂಬಿಕೆಯಿಂದ ಸತಿ-ಪತಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಸಲಹೆಯಿತ್ತರು.

ಕು. ಸುಪ್ರಿಯಾ ಕೋನಾ೯ಯ ಇವರ ಪ್ರಾಥ೯ನೆ ಬಳಿಕ ಡಿ. ಹಷ೯ಂದ್ರ ಕುಮಾರ್ ಸ್ವಾಗತಿಸಿದರು. ಶ್ರೀನಿವಾಸ್ ರಾವ್ ಕಾಯ೯ಕ್ರಮ ನಿರೂಪಿಸಿದರು. ರತ್ನವರ್ಮ ಜೈನ್ ಧನ್ಯವಾದವಿತ್ತರು.

Related posts

ನ್ಯಾಯಾಲಯದ ವಿಚಾರಣೆ ಹಾಜರಾಗದೆ 56 ವರ್ಷಗಳಿಂದ ವಿವಿಧ ಹೆಸರುಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿ: ಕುಟುಂಬವನ್ನು ಪತ್ತೆ ಹಚ್ಚಿದ ಬೆಳ್ತಂಗಡಿ ಪೊಲೀಸರು ಮರಣ ಹೊಂದಿದ್ದ ಆರೋಪಿ

Suddi Udaya

ಬೆಳ್ತಂಗಡಿ ಸುಳ್ಳಿನ ಸರದಾರ, ಆಮದು ನಾಯಕ ರಕ್ಷಿತ್ ಶಿವರಾಮ್‌ಗೆ ರಾಜಕೀಯ ಪ್ರಬುದ್ಧತೆ ಇಲ್ಲ. ನಿಮ್ಮ ಸುಳ್ಳನ್ನು ಬೆಳ್ತಂಗಡಿಯ ಪ್ರಬುದ್ದ ಜನರು ಒಪ್ಪಿಕೊಳ್ಳುವುದಿಲ್ಲ, ಪತ್ರಿಕಾಗೋಷ್ಠಿಯಲ್ಲಿ ಶಾಸಕ ಹರೀಶ್ ಪೂಂಜ ತಿರುಗೇಟು

Suddi Udaya

ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷರಾಗಿ ರಾಘವ ಹೆಚ್ ಗೇರುಕಟ್ಟೆ ನೇಮಕ

Suddi Udaya

ಮದ್ದಡ್ಕ ರಾಮ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆ

Suddi Udaya

ಡಿ 19 :ಉಜಿರೆ  ಗ್ರಾ.ಪಂ.ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya

ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ರೂ. 20 ಸಾವಿರ ಹಸ್ತಾಂತರ

Suddi Udaya
error: Content is protected !!