ಗೇರುಕಟ್ಟೆಯಲ್ಲಿ ಗಣೇಶ್ ಕ್ಲಿನಿಕಲ್ ಲ್ಯಾಬೋರೇಟರಿ ಶುಭಾರಂಭ

Suddi Udaya

ಬೆಳ್ತಂಗಡಿ : ಗೇರುಕಟ್ಟೆ ವೆಲೆನ್ಸಿ ಕಟ್ಟಡದಲ್ಲಿ ಗಣೇಶ್ ಕ್ಲಿನಿಕಲ್ ಲ್ಯಾಬೋರೇಟರಿ ರಕ್ತ ಪರೀಕ್ಷಾ ಕೇಂದ್ರ ಮೇ.1 ಶುಭಾರಂಭ ಗೊಂಡಿದೆ.

ಕಳಿಯ ಪಂಚಾಯತ್ ಅಧ್ಯಕ್ಷ ದಿವಾಕರ ಮೆದಿನ ಹಾಗೂ ಗೇರುಕಟ್ಟೆ “ಜ್ಯೋತಿ ಕ್ಲಿನಿಕ್” ಡಾ.ಅನಂತ್ ಭಟ್ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿ, ಶುಭ ಹಾರೈಸಿದರು.

ಸ್ಥಳೀಯ ಅಂಗಡಿ ಮಾಲೀಕರು, ಹಿತೈಷಿಗಳು ಆಗಮಿಸಿದರು. ಸಿಬ್ಬಂದಿಗಳಾದ ಶ್ರೀಮತಿ ಕೃಪಾ ಮತ್ತು ಕುಮಾರಿ ಚೈತ್ರಾ ಉಪಸ್ಥಿತರಿದ್ದು ಸಹಕರಿಸಿದರು.

ಸಂಸ್ಥೆಯ ಮಾಲೀಕರಾದ ಶಿತಿಕಂಠ ಭಟ್ ಮಾತನಾಡುತ್ತಾ ನಮ್ಮ ರಕ್ತ ಪರೀಕ್ಷಾ ಕೇಂದ್ರದಲ್ಲಿ ರಕ್ತ,ಕಫ ಪರೀಕ್ಷೆಯನ್ನು ಕ್ಲಪ್ತ ಸಮಯದಲ್ಲಿ ಮಾಡಲಾಗುತ್ತದೆ. ಗ್ರಾಹಕರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಸೇವೆ ದೊರೆಯುತ್ತದೆ ಎಂದು ಹೇಳಿದರು. ಹಾಗೂ ಆಗಮಿಸಿದ ಹಿತೈಷಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.

Leave a Comment

error: Content is protected !!