September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಶಿಲ ಸೀಮಾ ಚಿತ್ತಪಾವನ ಸಮಾಜ ಸಂಘದ ವಾಷಿ೯ಕೋತ್ಸವ ಹಾಗೂ ವೇದ ಕುಸುಮ ಶಿಬಿರ ಉದ್ಘಾಟನೆ

ಕೊಕ್ಕಡ: ಶಿಶಿಲ ಸೀಮಾ ಚಿತ್ತಪಾವನ ಸಮಾಜ ಸಂಘ ಅರಸಿನಮಕ್ಕಿ ಇದರ ವಾಷಿ೯ಕೋತ್ಸವವು ಮೇ.2ರಂದು ಶ್ರೀಕಾಲಕಾಮ ಪರಶುರಾಮ ದೇವಸ್ಥಾನದ ಚಿತ್ಪಾವನ ಸಭಾ ಭವನ ದರ್ಬೆತಡ್ಕದಲ್ಲಿ ನಡೆಯಿತು.

ಪರಶುರಾಮ ದೇವರಿಗೆ ಪವಮಾನ ಅಭಿಷೇಕ, ಗಣಹೋಮ, ಸಮಾಜದ ವಟುಗಳಿಗೆ ಬ್ರಹ್ಮೋಪದೇಶ ನೀಡುವ ಕಾಯ೯ಕ್ರಮ ಜರಗಿತು.

ಬಳಿಕ ಸಂಘದ ಮಹಾಸಭೆ ಜರಗಿತು, ನೂತನ ಅಧ್ಯಕ್ಷರಾಗಿ ಶ್ರೀವರದ ಶಂಕರ ದಾಮಲೆ, ಕಾರ್ಯದಶಿ೯ಯಾಗಿ ವೆಂಕಟೇಶ ದಾಮಲೆ ಆಯ್ಕೆಯಾದರು.

ಮೇ.3ರಂದು ವೇದ ಕುಸುಮ ಶಿಬಿರವನ್ನು ಗೋಪಾಲ ಮರಾಠೆ ಫೋಕ೯ಳ, ವತ್ಸಲಾ ಅವರು ದೀಪ ಪ್ರಜ್ವಲಿಸುವುದರೊಂದಿಗೆ ಉದ್ಘಾಟಿಸಿದರು.

ಪ್ರಾಸ್ತಾವಿಕವಾಗಿ ಶಿಬಿರಾಥಿ೯ಗಳಿಗೆ ಯೋಗೀಶ ದಾಮಲೆಯವರು ಮಾತನಾಡಿ ಹಲವು ವರ್ಷಗಳಿಂದ ನಿರಂತರವಾಗಿ ವೇದ ಕುಸುಮ ಶಿಬಿರವು ಚಿತ್ಪಾವನ ಸಭಾ ಭವನದಲ್ಲಿ ಮೇ ತಿಂಗಳಲ್ಲಿ ನಡೆಯುತ್ತಾ ಬಂದಿದೆ. ಈ ಶಿಬಿರದಲ್ಲಿ ಸಮಾಜದ ಹಲವು ವಟುಗಳು ನಿತ್ಯಾಹ್ನಿಕ, ಸಂಧ್ಯಾವಂದನೆ ಮತ್ತು ಪೂಜಾ ವಿಧಿಗಳನ್ನು ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಸಾಥ೯ಕತೆಯನ್ನು ಪಡೆದಿರುವುದು ಹೆಮ್ಮೆಯ ವಿಷಯ ಹಾಗೂ ಶಿಬಿರವು ಮೇ.12ರ ವರೆಗೆ ನಡೆಯಲಿದೆ ಎಂದರು.

ಶಿಬಿರದಲ್ಲಿ ಸಮಾಜದ ವಟುಗಳಿಗೆ ಸಂಧ್ಯಾವಂದನೆ, ಅಥವ೯ಶೀಷ೯, ಪುರುಷ ಸೂಕ್ತ, ಪುಷ್ಪಾಂಜಲಿಗಳನ್ನು ಹತ್ತು ದಿನಗಳ ಕಾಲದವರೆಗೆ ಗುರುಕುಲ ಮಾದರಿಯಲ್ಲಿ ಕಲಿಸಲಾಗುವುದು. ಗುರುಗಳಾಗಿ ಗೋಪಾಲ ಮರಾಠೆಯವರು ಸೇವೆ ಸಲ್ಲಿಸುತ್ತಾರೆ,

Related posts

ಮುಂಡಾಜೆ ಯಂಗ್ ಚಾಲೆಂಜರ್ಸ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

Suddi Udaya

ಹೆಜ್ಜೇನು ದಾಳಿಯಿಂದ ಮಗುವನ್ನು ರಕ್ಷಿಸಿದ ಮೇಲಂತ ಬೆಟ್ಟು ಗ್ರಾಮ ಪಂಚಾಯತ್ ಸಿಬ್ಬಂದಿ: ಚಂದ್ರವತಿ ಯವರ ಸಮಯ ಪ್ರಜ್ಞೆ ತಾಯಿ ಮಮತೆ ಧೈರ್ಯಕ್ಕೆ ಗ್ರಾಮಸ್ಥರ ಮೆಚ್ಚುಗೆ

Suddi Udaya

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಕೊಕ್ರಾಡಿ ಪ್ರೌಢಶಾಲೆಯ ಶಿಕ್ಷಕಿ ಶ್ರೀಮತಿ ಅಕ್ಕಮ್ಮ ರವರಿಗೆ ಶಿಕ್ಷಣ ರತ್ನ ಪ್ರಶಸ್ತಿ ಗೌರವ

Suddi Udaya

ಉಜಿರೆ: “ಯಕ್ಷಸಿರಿ” ಪ್ರಶಸ್ತಿಗೆ ಆಯ್ಕೆಯಾದ ದಿವಾಕರ್ ದಾಸ್ ಕಾವಳಕಟ್ಟೆ ರವರಿಗೆ ಗೌರವಾರ್ಪಣೆ

Suddi Udaya

ಕಡಮಗುಂಡಿ, ಬೊಳ್ಳೆ ಜಲಪಾತ, ಗಡಾಯಿಕಲ್ಲು ಪ್ರವಾಸಿ ತಾಣಗಳಿಗೆ ಹೇರಿದ್ದ ನಿರ್ಬಂಧ ನಾಳೆಯಿಂದ (ಜ.9) ತೆರೆ

Suddi Udaya
error: Content is protected !!