July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಶಿಶಿಲ ಸೀಮಾ ಚಿತ್ತಪಾವನ ಸಮಾಜ ಸಂಘದ ವಾಷಿ೯ಕೋತ್ಸವ ಹಾಗೂ ವೇದ ಕುಸುಮ ಶಿಬಿರ ಉದ್ಘಾಟನೆ

ಕೊಕ್ಕಡ: ಶಿಶಿಲ ಸೀಮಾ ಚಿತ್ತಪಾವನ ಸಮಾಜ ಸಂಘ ಅರಸಿನಮಕ್ಕಿ ಇದರ ವಾಷಿ೯ಕೋತ್ಸವವು ಮೇ.2ರಂದು ಶ್ರೀಕಾಲಕಾಮ ಪರಶುರಾಮ ದೇವಸ್ಥಾನದ ಚಿತ್ಪಾವನ ಸಭಾ ಭವನ ದರ್ಬೆತಡ್ಕದಲ್ಲಿ ನಡೆಯಿತು.

ಪರಶುರಾಮ ದೇವರಿಗೆ ಪವಮಾನ ಅಭಿಷೇಕ, ಗಣಹೋಮ, ಸಮಾಜದ ವಟುಗಳಿಗೆ ಬ್ರಹ್ಮೋಪದೇಶ ನೀಡುವ ಕಾಯ೯ಕ್ರಮ ಜರಗಿತು.

ಬಳಿಕ ಸಂಘದ ಮಹಾಸಭೆ ಜರಗಿತು, ನೂತನ ಅಧ್ಯಕ್ಷರಾಗಿ ಶ್ರೀವರದ ಶಂಕರ ದಾಮಲೆ, ಕಾರ್ಯದಶಿ೯ಯಾಗಿ ವೆಂಕಟೇಶ ದಾಮಲೆ ಆಯ್ಕೆಯಾದರು.

ಮೇ.3ರಂದು ವೇದ ಕುಸುಮ ಶಿಬಿರವನ್ನು ಗೋಪಾಲ ಮರಾಠೆ ಫೋಕ೯ಳ, ವತ್ಸಲಾ ಅವರು ದೀಪ ಪ್ರಜ್ವಲಿಸುವುದರೊಂದಿಗೆ ಉದ್ಘಾಟಿಸಿದರು.

ಪ್ರಾಸ್ತಾವಿಕವಾಗಿ ಶಿಬಿರಾಥಿ೯ಗಳಿಗೆ ಯೋಗೀಶ ದಾಮಲೆಯವರು ಮಾತನಾಡಿ ಹಲವು ವರ್ಷಗಳಿಂದ ನಿರಂತರವಾಗಿ ವೇದ ಕುಸುಮ ಶಿಬಿರವು ಚಿತ್ಪಾವನ ಸಭಾ ಭವನದಲ್ಲಿ ಮೇ ತಿಂಗಳಲ್ಲಿ ನಡೆಯುತ್ತಾ ಬಂದಿದೆ. ಈ ಶಿಬಿರದಲ್ಲಿ ಸಮಾಜದ ಹಲವು ವಟುಗಳು ನಿತ್ಯಾಹ್ನಿಕ, ಸಂಧ್ಯಾವಂದನೆ ಮತ್ತು ಪೂಜಾ ವಿಧಿಗಳನ್ನು ತಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಂಡು ಸಾಥ೯ಕತೆಯನ್ನು ಪಡೆದಿರುವುದು ಹೆಮ್ಮೆಯ ವಿಷಯ ಹಾಗೂ ಶಿಬಿರವು ಮೇ.12ರ ವರೆಗೆ ನಡೆಯಲಿದೆ ಎಂದರು.

ಶಿಬಿರದಲ್ಲಿ ಸಮಾಜದ ವಟುಗಳಿಗೆ ಸಂಧ್ಯಾವಂದನೆ, ಅಥವ೯ಶೀಷ೯, ಪುರುಷ ಸೂಕ್ತ, ಪುಷ್ಪಾಂಜಲಿಗಳನ್ನು ಹತ್ತು ದಿನಗಳ ಕಾಲದವರೆಗೆ ಗುರುಕುಲ ಮಾದರಿಯಲ್ಲಿ ಕಲಿಸಲಾಗುವುದು. ಗುರುಗಳಾಗಿ ಗೋಪಾಲ ಮರಾಠೆಯವರು ಸೇವೆ ಸಲ್ಲಿಸುತ್ತಾರೆ,

Related posts

ಬೆಳ್ತಂಗಡಿ: ಎಸ್.ಐ.ಟಿ. ಪೊಲೀಸ್ ಠಾಣೆಗೆ ದೂರುದಾರ ಜಯಂತ್ ಟಿ. ಭೇಟಿ

Suddi Udaya

ಕರಿಮಣೇಲು ನಿವಾಸಿ ಶ್ರೀಮತಿ ಶಾಂತ ನಿಧನ

Suddi Udaya

ಅಳದಂಗಡಿಯಲ್ಲಿ ಭಕ್ತಿ ಭಾವದಿಂದ ಮೊಳಗಿದ ಹನುಮೋತ್ಸವ, ಸಾವಿರಾರು ಭಕ್ತರು ಭಾಗಿ ಕುಣಿತ ಭಜನೆ, ಹನುಮ ಯಾಗ, ಹನುಮಾನ್ ಚಾಲಿಸ ಪಠಣ, ಹನುಮ ಶ್ರೀರಕ್ಷೆ ವಿತರಣೆ, ಲಂಕಾದಹನ, ಶಿವಾಜಿ‌ ನಾಟಕ

Suddi Udaya

ಶಿಶಿಲ ಒಟ್ಲ ಗರಡಿಗೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಇಂದಬೆಟ್ಟು ಎಮ್.ಜೆ.ಎಮ್ ಮಸೀದಿಯಲ್ಲಿ ಸಂಭ್ರಮದ ಈದ್ ಉಲ್ ಫಿತರ್ ಆಚರಣೆ

Suddi Udaya

ನೆರಿಯ: ಮುಚ್ಚಿರಾಲಿ ಎಂಬಲ್ಲಿ ಅಪಾಯದ ಅಂಚಿನಲ್ಲಿರುವ ಕಾಲುಸಂಕ : ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಫಾರೆಸ್ಟರ್ ಹಾಗೂ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ : ಮರವನ್ನು ತೆರವುಗೊಳಿಸುವುದಾಗಿ ಭರವಸೆ

Suddi Udaya
error: Content is protected !!