ಮರದಿಂದ ಬಿದ್ದು ಬೆನ್ನುಮೂಳೆಗೆ ಗಂಭೀರ ಗಾಯ, ನೆರವಿನ ನಿರೀಕ್ಷೆಯಲ್ಲಿ ಶಿರ್ಲಾಲುವಿನ ಬಡ ಕುಟುಂಬ

Suddi Udaya

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಶಿರ್ಲಾಲು ಗ್ರಾಮದ ಬೈಲಡ್ಕ ನಿವಾಸಿ ಲಲಿತಾರವರ ಪತಿ ನಾರಾಯಣ ಮಲೆಕುಡಿಯರವರು ತಮ್ಮ ತೋಟಕ್ಕೆ ಸೊಪ್ಪು ಕಡಿಯುವ ಸಂದರ್ಭದಲ್ಲಿ ಮರದಿಂದ ಬಿದ್ದು ಬೆನ್ನುಮೂಳೆಗೆ ಗಂಭೀರ ಪ್ರಮಾಣದ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರು ವೆನ್ಸಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೀಗ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಫಾಧರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲು ವೈದ್ಯರು ತಿಳಿಸಿದ್ದು ಆಸ್ಪತ್ರೆಯ ವೈದ್ಯಕೀಯ ಖರ್ಚು ಸುಮಾರು ರೂ.10 ಲಕ್ಷ ಬೇಕಾಗಬಹುದು ಎಂದು ವೈದ್ಯರು ತಿಳಿಸಿರುತ್ತಾರೆ.

ಇಗಾಗಲೇ ಚಿಕಿತ್ಸೆಗೆ ಅಲ್ಲಿ ಇಲ್ಲಿ ಸಾಲ ಮಾಡಿದ್ದು ಕುಟುಂಬ ನಿರ್ವಹಣೆಗೆ ಕಷ್ಟ ಸಾಧ್ಯವಾಗಿದೆ. ಇನ್ನೂ 10 ಲಕ್ಷ ಆಸ್ಪತ್ರೆ ವೆಚ್ಚ ಭರಿಸಲು ಅಸಮರ್ಥರಾಗಿರುವ ಈ ಕುಟುಂಬಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಇವರ ಇಬ್ಬರು ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ನಾರಾಯಣ ಮಲೆಕುಡಿಯರವರು ಈ ಕುಟುಂಬಕ್ಕೆ ಆಧಾರವಾಗಿದ್ದು ಈ ಸಮಸ್ಯಯಿಂದ ಕುಟುಂಬದ ಆಧಾರಸ್ತಂಭ ಕುಸಿದಂತಾಗಿದೆ. ಈ ಕುಟುಂಬಕ್ಕೆ ಸಹಾಯಧನ ನೀಡಿ ಆಧಾರವಾಗಲು ಇಚ್ಚಿಸುವ ವ್ಯಕ್ತಿಗಳು ಅವರ ಪತ್ನಿಯ ಬ್ಯಾಂಕ್ ಅಕೌಂಟ್ ಗೆ ಅಥವಾ ಸ್ಯಾನರ್ ಗೆ ಆರ್ಥಿಕ ನೆರವು ಮಾಡಬಹುದಾಗಿದೆ.

Name:- Lalitha
A/c no:- 8715119001062
IFSC code:- CNRB0008715
Canara bank branch ಶಿರ್ಲಾಲು

ಸಂಪರ್ಕ ಸಂಖ್ಯೆ : 94813 61918 ಲಲಿತಾ (ಇವರ ಪತ್ನಿ)
ದಯವಿಟ್ಟು ಈ ಬಡ ಕುಟುಂಬಕ್ಕೆ ಧನ ಸಹಾಯ ಮಾಡುವ ಮೂಲಕ ಸಹಕಾರ ನೀಡಿ.

Leave a Comment

error: Content is protected !!