April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತಣ್ಣೀರುಪoತ: ಪಣೆಕ್ಕರ ಸುಪಾರಿ ಟ್ರೇಡರ್ಸ್ ಅಡಿಕೆ, ಕಾಡುತ್ಪತಿ ಮಳಿಗೆ ಶುಭಾರಂಭ

ತಣ್ಣೀರುಪoತ : ಪಣೆಕ್ಕರ ಸುಪಾರಿ ಟ್ರೇಡರ್ಸ್ ಅಡಿಕೆ, ಕಾಡುತ್ಪತಿ ವ್ಯಾಪಾರದ ಮಳಿಗೆ ಮೇ 06 ರಂದು ತಣ್ಣೀರುಪoತ ಗ್ರಾಮದ ಕಲ್ಲೇರಿ ಮುಖ್ಯರಸ್ತೆಯ ಮಾತೃಛಾಯ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷೆ ಹೇಮಾವತಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ,ಸುದರ್ಶನ್ ಹೆಗ್ಡೆ ಕಣಿಯೂರು ಗುತ್ತು, ನೇತ್ರಾವತಿ ಹೋಟೆಲ್ ಮಾಲಕರಾದ ಧರ್ಣಪ್ಪ ಗೌಡ, ತಣ್ಣೀರುಪoತ ಗ್ರಾಮ ಪಂಚಾಯತ್ ಸದಸ್ಯರಾದ ಅಯೂಬ್ ಕರಾಯ, ಸೀತಾರಾಮ ಮಡಿವಾಳ, ಯಶೋಧರ ಶೆಟ್ಟಿ, ಹಾಗೂ ಶ್ರೀ ಮಾತಾ ಸುಪಾರಿ ಟ್ರೇಡರ್ಸ್ ಮಾಲಕರಾದ ಸಚಿನ್ ಗೌಡ, ಶ್ರೀದೇವಿ ಸುಪಾರಿ ಟ್ರೇಡರ್ಸ್ ಮಾಲಕರಾದ ಪ್ರಶಾಂತ್ ಶೆಟ್ಟಿ ಮುಡಾಯೂರು, ಶಾರದಾ ರೈ ಮುಗೆರೋಡಿ, ಅಣ್ಣಿ ಶೆಟ್ಟಿ ಪಣೆಕ್ಕರ, ರಾಜೇಶ್ ಶೆಟ್ಟಿ ನವಶಕ್ತಿ ಉಪಸ್ಥಿತರಿದ್ದು, ಶುಭ ಹಾರೈಸಿದರು.


ನರಸಿಂಹ ಶೆಟ್ಟಿ, ಮತ್ತು ಮನೆಯವರು ಬಂದಂತಹ ಅತಿಥಿ ಗಣ್ಯರನ್ನು ಸತ್ಕರಿಸಿದರು.
ಅಂಗಡಿ ಮಾಲಕರಾದ ರಂಜಿತ್ ಶೆಟ್ಟಿ ಪಣೆಕ್ಕರ ಸ್ವಾಗತಿಸಿದರು. ಕಟ್ಟಡ ಮಾಲಿಕರಾದ ಕೃಷ್ಣಪ್ಪ ಪೂಜಾರಿ ಧನ್ಯವಾದವಿತ್ತರು.


ಅಡಿಕೆ, ಗೇರುಬೀಜ, ತೆಂಗಿನಕಾಯಿ, ಕಾಳುಮೆಣಸು, ಮುಂತಾದ ಕಾಡುತ್ಪತಿಗಳನ್ನು ಖರೀದಿಸಲಾಗುವುದು ಎಂದು ಮಾಲಕರಾದ ರಂಜಿತ್ ಶೆಟ್ಟಿ ಪಣೆಕ್ಕರ ತಿಳಿಸಿದರು.

Related posts

ಶಿಬಾಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ವಿನೂತನ ಯೋಜನೆ: ಕ್ಷೇತ್ರದಿಂದ ಹೊರಗಿದ್ದರೂ ಪ್ರತಿದಿನದ ಪೂಜೆಯನ್ನು ಯೂಟ್ಯೂಬ್ ಮೂಲಕ ನೇರವಾಗಿ ನೋಡುವ ಅವಕಾಶ

Suddi Udaya

ಬೆಳ್ತಂಗಡಿ ಹೋಲಿ ರಿಡೀಮರ್ ಚರ್ಚ್ ಗೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.

Suddi Udaya

ಕಳೆಂಜ: ನಡುಜಾರು ಸ.ಕಿ.ಪ್ರಾ. ಶಾಲಾ ಮಕ್ಕಳಿಗೆ ರಾಜೇಶ್ ನಿಡ್ಡಾಜೆ ಯವರಿಂದ ಸಮವಸ್ತ್ರ ವಿತರಣೆ

Suddi Udaya

ವಾಣಿ ಕಾಲೇಜಿನಲ್ಲಿ ನಿಹಾರ್ ಎಸ್. ಆರ್‌ಗೆ ಅಭಿನಂದನೆ

Suddi Udaya

ಎಸ್‌ವೈಎಸ್ ಗುರುವಾಯನಕೆರೆ ಶಾಖೆಯ ವತಿಯಿಂದ 150 ಕುಟುಂಬಗಳಿಗೆ ರಂಝಾನ್ ಕಿಟ್ ವಿತರಣೆ

Suddi Udaya

ಗುರುವಾಯನಕೆರೆ: ಪಣೆಜಾಲು ಇಡ್ಯಾ, ಮಿಂಚಿನಡ್ಕ ಪರಿಸರದಲ್ಲಿ ಗುಡ್ಡಕ್ಕೆ ಬೆಂಕಿ

Suddi Udaya
error: Content is protected !!