ಮಾಜಿ ಶಾಸಕ ವಸಂತ ಬಂಗೇರ ಅಗಲುವಿಕೆಗೆ ಕಾಜೂರು ಸಮಿತಿಯಿಂದ ಸಂತಾಪ

Suddi Udaya

ಬೆಳ್ತಂಗಡಿ: ವಸಂತ ಬಂಗೇರ ಅವರು ತನ್ನ ವಿಶಿಷ್ಟ ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವ ನಾಯಕರಾಗಿದ್ದು ನಿಜವಾದ ಅರ್ಥದಲ್ಲಿ ಬಡವರ ಬಂಧುವಾಗಿದ್ದರು‌.


ಐದು ಬಾರಿ ಶಾಸಕರಾಗಿದ್ದ ಅವರು ತನ್ನ ಅವಧಿಯುದ್ದಕ್ಕೂ ಕಾಜೂರು ದರ್ಗಾ ಮತ್ತು ಮಸ್ಜಿದ್ ನ ಅಭಿವೃದ್ಧಿಯಲ್ಲಿ ಕೊಡುಗೆ ನೀಡಿದ್ದರು. ಕಾಜೂರನ್ನು ಸಂಪರ್ಕಿಸುವ ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಮಾಡಿಸಿಕೊಡುವ ಮೂಲಕ ನೆನಪಿನಲ್ಲಿ ಉಳಿಯುವ ಸೇವೆ ನೀಡಿದ್ದರು. ಕಾಜೂರು ಕ್ಷೇತ್ರದ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಅವರು ಜನತಾದಳ ಪಕ್ಷದಲ್ಲಿ ಶಾಸಕರಾಗಿದ್ದಾಗ ಕಾಜೂರು ಕ್ಷೇತ್ರಕ್ಕೆ ಪಾದಯಾತ್ರೆಯ ಮೂಲಕ ಆಗಮಿಸಿದ್ದರು.


ಅವರ ಅಗಲುವಿಕೆಗೆ ಕಾಜೂರು ಆಡಳಿತ ಮಂಡಳಿ ತೀವ್ರ ಸಂತಾಪ ಸೂಚಿಸುತ್ತದೆ.

Leave a Comment

error: Content is protected !!