ಬೆಳ್ತಂಗಡಿಯ ನೂತನ ತಾಲೂಕು ಬಸ್ ನಿಲ್ದಾಣಕ್ಕೆ ಮಾಜಿ ಶಾಸಕ ಕೆ.ವಸಂತ ಬಂಗೇರ ಹೆಸರಿಡಲು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಆಗ್ರಹ

Suddi Udaya

ಬೆಳ್ತಂಗಡಿಯ ರಾಜಕಾರಣದಲ್ಲಿ 5 ದಶಕಗಳ ಕಾಲ ಸೇವೆ ಸಲ್ಲಿಸಿ , 5 ಬಾರಿ ಶಾಸಕರಾಗಿ ಆಯ್ಕೆಯಾಗಿ ಅವಿಶ್ರಾಂತ ಜನರ ಸೇವೆಗೈದ ಮಾಜಿ ಶಾಸಕ ವಸಂತ ಬಂಗೇರ ಅವರ ಸ್ಮರಣಾರ್ಥ ಬೆಳ್ತಂಗಡಿಯ ತಾಲೂಕು ಬಸ್ ತಂಗುದಾಣಕ್ಕೆ ಅವರ ಹೆಸರನ್ನೀಡಬೇಕು ಮತ್ತು ಅವರ ಪುತ್ಥಳಿ/ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಭಾರತೀಯ ಜನತಾ ಪಾರ್ಟಿಯ ಮೂಲಕ ರಾಜಕೀಯ ಪ್ರವೇಶಿಸಿ ತನ್ನ ವೈಯಕ್ತಿಕ ವರ್ಚಸ್ಸಿನ ಮೂಲಕ ಮೂರು ಪಕ್ಷಗಳಲ್ಲೂ ಶಾಸಕರಾದ ರಾಜ್ಯದ ಏಕೈಕ ರಾಜಕಾರಣಿ ಬಂಗೇರರು. ಜನರ ಸೇವೆಯನ್ನು ತನ್ನ ಉಸಿರಾಗಿಸಿ ತನ್ನ ಇಳಿ ವಯಸ್ಸಿನಲ್ಲೂ ಬಡವರ ಸೇವೆಗೈದ ಅಪರೂಪದ ಜನಸೇವಕ. ತನ್ಮೂಲಕ ರಾಜ್ಯಸರ್ಕಾರ ಬಂಗೇರ ಅವರ ಸೇವೆಯನ್ನು ಪರಿಗಣಿಸಿ, ಪಕ್ಷಾತೀತವಾಗಿ ಜನರ ಒಕ್ಕೊರಲ ಬೇಡಿಕೆಯಾದ ಬಸ್ ನಿಲ್ದಾಣಕ್ಕೆ ಹೆಸರು ಮತ್ತು ಪುತ್ಥಳಿ ಸ್ಥಾಪನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

Leave a Comment

error: Content is protected !!