ಗೇರುಕಟ್ಟೆ: ಕಬಕದ ಇನೋವ ಕಾರು ಡಿಕ್ಕಿ: ಜೀವ ಉಳಿಸಿದ ಮಣ್ಣಿನ ದಿಣ್ಣೆ

Suddi Udaya

ಬೆಳ್ತಂಗಡಿ :ಗೇರುಕಟ್ಟೆ ಸಮೀಪದ ಸಂಬೋಳ್ಯ ತಿರುವು ರಸ್ತೆಯ ಪಕ್ಕದ ಮಣ್ಣಿನ ದಿಣ್ಣೆಗೆ ಇನ್ನೋವ ಕಾರು ಡಿಕ್ಕಿಯಾದ ಘಟನೆ ಮೇ.14 ರಂದು ಸಂಜೆ ನಡೆಯಿತು.

ಪುತ್ತೂರು ತಾಲೂಕಿನ ಕಬಕದ ಅನ್ವರ್ ತಮ್ಮ ಇನೋವ ಕಾರಿನಲ್ಲಿ (ಕೆ.ಎ.೦೩. ಎನ್.ಸಿ ೯೬೬೧) ಕುಟುಂಬದ ಸದಸ್ಯರೊಂದಿಗೆ ಬೆಳ್ತಂಗಡಿ ಕಾಜೂರು ದರ್ಗಾ ಝಿಯಾರತ್ ಯಾತ್ರೆ ಮುಗಿಸಿ ಕಬಕ ತಮ್ಮ ಊರಿಗೆ ಗುರುವಾಯನಕೆರೆ, ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಮೂಲಕ ಹೋಗುತ್ತಿದ್ದಾಗ ಗೇರುಕಟ್ಚೆ ಸಮೀಪದ ಸಂಬೋಳ್ಯ ರಸ್ತೆಯ ಪಕ್ಕದ ಡಿಕ್ಕಿಯಾಗಿದೆ.ಕಾರಿನಲ್ಲಿ ಚಾಲಕ ಸೇರಿ ಇಬ್ಬರು ಜನ ಗಂಡಸರು ಇಬ್ಬರು ಹೆಂಗಸರು,2ಮಕ್ಕಳು, 1ಚಿಕ್ಕ ಮಗು ಸೇರಿ ಸಣ್ಣ, ಪುಟ್ಟ ಗಾಯಗೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ.

ಘಟನಾ ಸ್ಥಳದಲ್ಲಿ ವಿದ್ಯುತ್ ಟವರ್ ಹಾಗೂ ವಿದ್ಯುತ್ ಕಂಬಗಳ ಮಧ್ಯೆ ಕೂದಲೇಳೆವ ಅಂತರದಲ್ಲಿದ್ದು ಅದೃಷ್ಟವಶಾತ್ ದೊಡ್ಡ ಆನಾಹುತ ತಪ್ಪಿದೆ.ಚಾಲಕ ನಿದ್ದೆ ಮಂಪರಿನಲ್ಲಿದ್ದು ಅತೀ ವೇಗವಾಗಿ ಕಾರು ಡಿಕ್ಕಿ ಯಾಗಲು ಕಾರಣವೆಂದು ಸ್ಥಳೀಯ ಪ್ರತ್ಯೇಕ್ಷದರ್ಶಿಗಳು ಅಭಿಪ್ರಾಯ ಪಟ್ಟರು.

Leave a Comment

error: Content is protected !!