July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬೆಳ್ತಂಗಡಿ : ಮಾಜಿ ಶಾಸಕ ವಸಂತ ಬಂಗೇರ ಮತ್ತು ಎಮ್. ತುಂಗಪ್ಪ ಗೌಡರಿಗೆ ಶ್ರದ್ಧಾಂಜಲಿ

ಬೆಳ್ತಂಗಡಿ: ಕೆ.ಪಿ.ಸಿ.ಸಿ ಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಕೆ. ಗಂಗಾಧರ ಗೌಡ ರವರ ಕಛೇರಿಯಲ್ಲಿ ಮಾಜಿ ಶಾಸಕರು ಹಾಗೂ ಸರಕಾರದ ಮಾಜಿ ಮುಖ್ಯ ಸಚೇತಕರಾದ ಕೆ. ವಸಂತ ಬಂಗೇರ ಮತ್ತು ಮಾಜಿ ಜಿಲ್ಲಾ ಪಂ. ಸದಸ್ಯರೂ, ಹಿರಿಯ ಸಹಕಾರಿಗಳಾದ ತುಂಗಪ್ಪ ಗೌಡರಿಗೆ ಮೇ 13 ರಂದು ಶ್ರದ್ಧಾಂಜಲಿ ಅರ್ಪಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನ ಪ್ರಾರ್ಥನೆ ಮಾಡಲಾಯಿತು.


ಕೆ. ಗಂಗಾಧರ ಗೌಡರು ವಸಂತ ಬಂಗೇರರ ಗುಣಗಾನ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದರು. ಇನ್ನೋರ್ವ ರಾಜಕಾರಿಣಿ ತುಂಗಪ್ಪ ಗೌಡರ ಬಗ್ಗೆ ನುಡಿನಮನ ಸಲ್ಲಿಸಿ ಅವರ ಆತ್ಮಕ್ಕೂ ಶಾಂತಿ ಸಿಗುವಂತೆ ಪ್ರಾರ್ಥಿಸಿದರು. ಸಭೆಯಲ್ಲಿ ಮಾಜಿ ಜಿಲ್ಲಾ ಪಂ. ಸದಸ್ಯರಾದ ಇ. ಸುಂದರ ಗೌಡ, ಮಾಜಿ ಜಿಲ್ಲಾ ಪಂ. ಸದಸ್ಯರಾದ ಬಿ. ರಾಜಶೇಖರ ಅಜ್ರಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕೆ. ಬಾಲಕೃಷ್ಣ ಗೌಡ, ನಿವೃತ್ತ ಎ.ಸಿ.ಎಫ್. ಎಮ್. ಎಸ್. ವರ್ಮ, ಕೆ.ಪಿ.ಸಿ.ಸಿ ಯ ಸದಸ್ಯರಾದ ಕೇಶವ ಗೌಡ ಬೆಳಾಲು, ತಾಲೂಕು ಪಂ. ಮಾಜಿ ಅಧ್ಯಕ್ಷರಾದ ಮುಕುಂದ ಸುವರ್ಣ, ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷರಾದ ಕೆ. ಸಲೀಂ ಗುರುವಾಯನಕೆರೆ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿಗಳಾದ ಬಿ.ಎ. ನಝೀರ್, ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಾನ್ ಪಡ್ಪು, ಪ್ರಮುಖರಾದ ಕೆ.ಎಸ್. ಅಬ್ದುಲ್ಲ, ಬಿ. ಮೆಹಬೂಬ್, ಕೆ. ಆನಂದ ಶೆಟ್ಟಿ, ನ. ಪಂ. ಸದಸ್ಯ ಜಗದೀಶ್ ಡಿ., ರಮೀಝ್ ಬೆಳ್ತಂಗಡಿ, ಸತ್ತಾರ್ ಸಾಹೇಬ್, ಎಸ್.ಎಮ್. ಕೋಯ ಉಜಿರೆ, ಯು.ಎ. ಹಮೀದ್, ಬಿ. ಎಮ್. ಹಮೀದ್, ಕೆ.ಪಿ.ಸಿ.ಸಿ ಯ ಸದಸ್ಯರಾದ ಕೆ. ಮೋಹನ್ ಶೆಟ್ಟಿಗಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕೆ. ಶೈಲೇಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಎಸ್ಸಿ ಘಟಕದ ಪ್ರಧಾನ ಕಾರ್ಯದರ್ಶಿ ಅವಿನಾಶ್ ಕುರ್ತ್ತೋಡಿ, ಪ್ರಭಾಕರ ಓಡಿಲ್ನಾಳ, ರಮೇಶ್ ರೆಂಕೆದಗುತ್ತು, ಗುರುಪ್ರಸಾದ್ ಮಾಲಾಡಿ, ಶಬೀರ್ ಮದ್ದಡ್ಕ, ಕೆ. ಬಾಲಕೃಷ್ಣ ಗೌಡ, ಸಂತೋಷ್ ಕುಮಾರ್ ಕಣಿಯೂರು, ಮುನಿರಾಜ ಅಜ್ರಿ, ಪುತ್ತಾಕ ಜೈ ಭಾರತ್, ಬಾಬು ಕೆ. ತೋಟತ್ತಾಡಿ, ಜನಾರ್ಧನ ಕುಲಾಲ್, ಮೂಸ ಕುಂಞ್ಞಿ, ಆಗಸ್ಟಿನ್ ನಡ, ಎಚ್. ರಾಮಕೃಷ್ಣ ಗೌಡ, ಸಿನಾನ್, ಲಕ್ಷಣ ಫಂಡಿಜೆ ಮುಂತಾದವರು ಉಪಸ್ಥಿತರಿದ್ದರು.

Related posts

ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ

Suddi Udaya

ಜು.1ರಿಂದ ಪದ್ಯಾಣ ಭಾಗವತ ಸಂಸ್ಮರಣೆ, ತಾಳಮದ್ದಳೆ ಸಪ್ತಾಹ: ಭಾಗವತ ಕುರಿಯ ಗಣಪತಿ ಶಾಸ್ತ್ರಿಗಳಿಗೆ ಪದ್ಯಾಣ ಪ್ರಶಸ್ತಿ ಹಾಗೂ ಹಿಮ್ಮೇಳ ವಾದಕ ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ಪ್ರಶಸ್ತಿ,

Suddi Udaya

ಉಜಿರೆ ಸಂಧ್ಯಾ ಪ್ರೆಶ್ ಉತ್ಪಾದನಾ ಮತ್ತು ಪ್ಯಾಕೇಜಿಂಗ್ ಘಟಕಕ್ಕೆ ಅತ್ಯುತ್ತಮ ‘ಟೈಮ್ಸ್ ಬ್ಯುಸಿನೆಸ್ ಅವಾರ್ಡ್ಸ್-2024’ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಅರ್ಚನಾ ರಾಜೇಶ್ ಪೈಯವರಿಗೆ ಪ್ರಶಸ್ತಿ ಹಸ್ತಾಂತರ

Suddi Udaya

ಧರ್ಮಸ್ಥಳ: ಶ್ರೀ ಮಂ.ಸ್ವಾ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬೆಳ್ತಂಗಡಿ: ವಿವಿಧ ಸೇತುವೆ ರಚನೆ ಕಾಮಗಾರಿಗಳಿಗೆ ರೂ. 6 ಕೋಟಿ 25 ಲಕ್ಷ ಅನುದಾನ ಸರ್ಕಾರದಿಂದ ಮಂಜೂರು: ರಕ್ಷಿತ್ ಶಿವರಾಮ್

Suddi Udaya

ನಿಡ್ಲೆ ಸ.ಪ್ರೌ. ಶಾಲೆಯಲ್ಲಿ ಶಾಲಾ ಸಂಸತ್ತು ಮತ್ತು ವಿವಿಧ ಸಂಘಗಳ ಉದ್ಘಾಟನೆ

Suddi Udaya
error: Content is protected !!