“ಪುಣ್ಯ ಕೋಟಿಗೆ ಒಂದು ಕೋಟಿ” ವಿಶೇಷ ಪರಿಕಲ್ಪನೆಯಲ್ಲಿ ನಡೆಯಲಿದೆ ನಂದಗೋಕುಲ ದೀಪೋತ್ಸವ

Suddi Udaya

ಬೆಳ್ತಂಗಡಿ: ನಂದಗೋಕುಲ ಗೋಶಾಲೆಯ ಅಭಿವೃದ್ಧಿಗಾಗಿ ಮತ್ತು ನಿರ್ಮಾಣ ನಿರ್ವಹಣೆಗಾಗಿ ಈ ಬಾರಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಬಾರಿಯ ನಂದಗೋಕುಲದ ದೀಪೋತ್ಸವವು ಮೇ.26 ಭಾನುವಾರದಂದು ನಡೆಯಲಿದ್ದು ನಂದಗೋಕುಲ ದೀಪೋತ್ಸವದ ಸಂಚಾಲನ ಸಮಿತಿಯ ಗೌರವಧ್ಯಕ್ಷರು, ಪ್ರಸಿದ್ದ ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ ಅವರ ವಿನೂತನ ಕಲ್ಪನೆ ಪುಣ್ಯಕೋಟಿಗೆ ಒಂದು ಕೋಟಿ ಎಂಬ ಘೋಷಣೆಯೊಂದಿಗೆ ಈ ಸಲದ ಗೋಗ್ರಾಸದ ಸಂಗ್ರಹ ನಡೆಯಲಿದೆ.

ಇದರ ನಿರ್ಮಾಣದಿಂದ ಹಿಡಿದು ನಿರ್ವಹಣೆವರೆಗೆ ಕಳೆದ 4 ವರ್ಷಗಳಲ್ಲಿ ಬಹಳಷ್ಟು ಖರ್ಚು ವೆಚ್ಚಗಳಾಗಿದ್ದು ಇವುಗಳೆಲ್ಲವನ್ನು ಸರಿದೂಗಿಸಲು ಸುಮಾರು ಒಂದು ಕೋಟಿ ರೂಪಾಯಿಯ ಧನ ಕ್ರೋಡೀಕರಿಸುವ ಯೋಜನೆ ಇದಾಗಿದೆ.

Leave a Comment

error: Content is protected !!