ಜೆಸಿಐ ಕೊಕ್ಕಡ ಕಪಿಲ ಘಟಕದ ವತಿಯಿಂದ ವಿಶಿಷ್ಟ ಶ್ರೇಣಿಯಲ್ಲಿ ಅಂಕಗಳನ್ನು ಪಡೆದಿರುವ ಕುಮಾರಿ ಮಾನಸರಿಗೆ ಸನ್ಮಾನ

Suddi Udaya

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲ ಘಟಕದ ವತಿಯಿಂದ ಸರಕಾರಿ ಪ್ರೌಢಶಾಲೆ ಶಾಲೆತಡ್ಕ ಇಲ್ಲಿಯ ಹತ್ತನೇ ತರಗತಿಯಲ್ಲಿ 582 ಅಂಕಗಳನ್ನು ಪಡೆದಿರುವ ವಸಂತಿ ಶ್ರೀಧರ್ ನಾಯ್ಕ ಇವರ ಪುತ್ರಿಯಾದ ಕುಮಾರಿ ಮಾನಸ ಇವರನ್ನು ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಎಚ್‌ ಜಿ ಎಫ್ ಜೆ ಸಿ ಸಂತೋಷ್ ಜೈನ್, ಕಾರ್ಯದರ್ಶಿ ಅಕ್ಷತ್ ರೈ, ನಿಕಟಪೂರ್ವ ಅಧ್ಯಕ್ಷರಾದ ಜೆಸಿ ಜಿತೇಶ್ ಎಲ್ ಪಿರೇರ, ಲೇಡಿ ಜೆಸಿ ಅಧ್ಯಕ್ಷೆ ಶೋಭಾ ಪಿ, ಘಟಕದ ಮಾರ್ಗದರ್ಶಕರಾದ ಜೋಸೆಫ್ ಪೀರೇರ, ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಅಧ್ಯಕ್ಷ ಜೆಎಫ್ಎಂ ಶ್ರೀಧರ್ ರಾವ್, ಜೆಸಿಐನ ಸದಸ್ಯರಾದ ಜೆಸಿ ಯೋಗಿಶ್ ಎಸ್ ಪಿ, ಜೆ ಸಿ ಚಂದನಾ ಜೈನ್, ಹಾಗೂ ದಕ್ಷ ಜೈನ್ ಉಪಸ್ಥಿತರಿದ್ದರು.


ಕಾರ್ಯಕ್ರಮದ ಜೆಸಿವಾಣಿ ಧನುಶ್ ಜೈನ್ ವಾಚಿಸಿದರು, ಎಚ್ ಜಿ ಎಫ್ ಜೆಸಿಂತಾ ಡಿಸೋಜ ಕುಮಾರಿ ಮಾನಸ ರ ಗುಣಗಾನ ಮಾಡಿದರು, ಜೆ ಸಿ ಎಚ್ ಜಿ ಎಫ್ ಸಂತೋಷ್ ಜೈನ್ ಸ್ವಾಗತಿಸಿ, ಜೆಸಿ ಅಕ್ಷತ್ ರೈ ವಂದಿಸಿದರು.

Leave a Comment

error: Content is protected !!