ಬೆಳ್ತಂಗಡಿ: ಕುತ್ಯಾರು ರಸ್ತೆಯಲ್ಲಿ ಗಾಳಿ ಮಳೆಗೆ ವಿದ್ಯುತ್ ತಂತಿ ಮೇಲೆ ಬಿದ್ದ ಮರ

Suddi Udaya

ಬೆಳ್ತಂಗಡಿ: ಸಂತೆಕಟ್ಟೆ ಬಳಿ ಕುತ್ಯಾರು ರಸ್ತೆಯಲ್ಲಿ ಮೇ 15ರಂದು ರಾತ್ರಿ ಮರವೊಂದು ಗಾಳಿಗೆ ತುಂಡರಿಸಿ ವಿದ್ಯುತ್ ತಂತಿ ಮೇಲೆ ಬಿದ್ದಿದೆ. ತಕ್ಷಣ‌ ಮೆಸ್ಕಾಂ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದಂತೆ ಮರ ತುಂಡರಿಸಿ ತೆಗೆದಿದ್ದಾರೆ. ಆದರೆ ರಸ್ತೆಯಲ್ಲೇ ಮರ ಇದ್ದುದರಿಂದ ರಸ್ತೆ ತಡೆಯುಂಟಾಯಿತು.

ಬಳಿಕ ಸಾರ್ವಜನಿಕರು ತೆರವಿಗೆ ಸಹಕರಿಸಿದರು. ನಗರದಲ್ಲಿ ಸೇರಿದಂತೆ ಬಹಳಷ್ಟು ಅಪಾಯಕಾರಿ ಮರವಿದೆ ಆದರೆ ತೆರವುಗೊಳಿಸದೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಆದರೆ ಇಲಾಖೆಗಳು ಟ್ರಿ ಟ್ರಿಮ್ಮಿಂಗ್ ನಡೆಸದಿರುವ ಬಗ್ಗೆ, ಸಾರ್ವಜನಿಕರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Comment

error: Content is protected !!