April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾಲಾಡಿ: ಬೆನ್ನುನೋವಿನ ಸಮಸ್ಯೆಯಿಂದ ಮನನೊಂದು ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

ಮಾಲಾಡಿ: ಇಲ್ಲಿಯ ಕೊಲ್ಪೆದಬೈಲ್ ಅತಿ೯ಲ‌ ನಿವಾಸಿ ವಲೇರಿಯನ್ ಡಿಸೋಜಾ(78ವ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 15 ರಂದು ವರದಿಯಾಗಿದೆ.


ಈ ಬಗ್ಗೆ ರೀಟಾ ಲೋಬೋ ಪೊಲೀಸರಿಗೆ ದೂರು ನೀಡಿ, ತನ್ನ ಗಂಡ ವಲೇರಿಯನ್ ಡಿಸೋಜಾ ಇತ್ತಿಚೀಗೆ ಗ್ಯಾಸ್ಟ್ರಿಕ್ ಮೂಲವ್ಯಾಧಿ, ಹಾಗೂ ವಿಪರೀತ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಮೇ 14 ರಂದು ತನ್ನ ಮಗ, ಮಕ್ಕಳೊಂದಿಗೆ ಆತನ ಹೆಂಡತಿಯ ಅಕ್ಕನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿರುತ್ತಾರೆ. ಮನೆಯಲ್ಲಿ ನಾನು ಹಾಗೂ ಗಂಡ ವಲೇರಿಯನ್ ಡಿಸೋಜಾ ಮಾತ್ರ ಇದ್ದೆವು. ಮೇ 15 ರಂದು ಬೆಳಿಗ್ಗೆ 6 ಗಂಟೆಗೆ ನಾನು ಮಡಂತ್ಯಾರು ಚರ್ಚ್ ಗೆ ಹೋಗಿ ಬೆಳಿಗ್ಗೆ 7:30ಕ್ಕೆ ಮನೆಗೆ ವಾಪಾಸು ಬಂದು ಗಂಡನನ್ನು ಕರೆದಾಗ ಪ್ರತ್ಯುತ್ತರ ಇಲ್ಲದುದರಿಂದ ಮನೆಯ ಒಳಗಡೆ ಹೊರಗಡೆ ಹುಡುಕಿದಾಗ ಗಂಡ ವಲೇರಿಯನ್ ಡಿಸೋಜಾ ರವರು ಮನೆಯ ಹಿಂಬದಿಯಲ್ಲಿ ಇರುವ 2 ಕಿಟಕಿಯ ಸನ್ ಡ್ಯಾಪ್ ನ ಮದ್ಯೆ ಇಟ್ಟಿದ್ದ ಮರದ ಪಕ್ಕಾಸಿ ಮದ್ಯಭಾಗಕ್ಕೆ ನೈಲಾನ್ ಹಗ್ಗವನ್ನು ಬಿಗಿದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಇತ್ತಿಚೇಗೆ ಗ್ಯಾಸ್ಟ್ರಿಕ್ ಮೂಲವ್ಯಾಧಿ, ಹಾಗೂ ವಿಪರೀತ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಪಾರೆಂಕಿ ಶ್ರೀ ಮಹಿಷಮರ್ದಿನಿ ಯಕ್ಷಗಾನ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಶಷ್ಟಬ್ಧಿ ಪೂರೈಸಿದ ಸುಣ್ಣೆಂಬಳ ವಿಶೇಶ್ವರ ಭಟ್ ರಿಗೆ ಗೌರವಾರ್ಪಣೆ

Suddi Udaya

ಪುತ್ತಿಲ ಹೇರಾಜೆ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಯಿಂದ ಮದೂರು ಶ್ರೀ ಮದನಂತೇಶ್ವರ ದೇವಸ್ಥಾನದಲ್ಲಿ ಭಜನಾ ಸೇವೆ

Suddi Udaya

ವಿದ್ಯಾಮಾತಾದ ಮುಕುಟಕ್ಕೆ ಮತ್ತೊಂದು ಗರಿಮೆ: SSC-GD(ಸಶಸ್ತ್ರ ಪಡೆ) ಲಿಖಿತ ಪರೀಕ್ಷೆ ಉತ್ತೀರ್ಣಗೊಂಡ ಇಂಜಿನಿಯರಿಂಗ್ ವಿದ್ಯಾರ್ಥಿನಿ ಲಹರಿ ಕೆ.

Suddi Udaya

ಬೀಡಿ ಬ್ರಾಂಚ್ ನ ಕಟ್ಟಡದ ಅಡ್ಡಕ್ಕೆ ವ್ಯಕ್ತಿ ನೇಣು ಹಾಕಿಕೊಂಡು ಆತ್ಮಹತ್ಯೆ

Suddi Udaya

ಹಿರಿಯ ಹಿಮ್ಮೇಳ ವಾದಕ ಧರ್ಮಸ್ಥಳದ ಸೀತಾರಾಮ ತೋಳ್ಪಾಡಿತ್ತಾಯರಿಗೆ ಕುರಿಯ ವಿಠಲ ಶಾಸ್ತ್ರಿ ನೆನಪಿನ ‘ಕುರಿಯ ಪ್ರಶಸ್ತಿ’ ಪ್ರದಾನ

Suddi Udaya

ಉಜಿರೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿಯ ವಾರ್ಷಿಕ ಮಹಾಸಭೆ

Suddi Udaya
error: Content is protected !!