24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾಲಾಡಿ: ಬೆನ್ನುನೋವಿನ ಸಮಸ್ಯೆಯಿಂದ ಮನನೊಂದು ವ್ಯಕ್ತಿ ನೇಣುಬಿಗಿದು ಆತ್ಮಹತ್ಯೆ

ಮಾಲಾಡಿ: ಇಲ್ಲಿಯ ಕೊಲ್ಪೆದಬೈಲ್ ಅತಿ೯ಲ‌ ನಿವಾಸಿ ವಲೇರಿಯನ್ ಡಿಸೋಜಾ(78ವ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೇ 15 ರಂದು ವರದಿಯಾಗಿದೆ.


ಈ ಬಗ್ಗೆ ರೀಟಾ ಲೋಬೋ ಪೊಲೀಸರಿಗೆ ದೂರು ನೀಡಿ, ತನ್ನ ಗಂಡ ವಲೇರಿಯನ್ ಡಿಸೋಜಾ ಇತ್ತಿಚೀಗೆ ಗ್ಯಾಸ್ಟ್ರಿಕ್ ಮೂಲವ್ಯಾಧಿ, ಹಾಗೂ ವಿಪರೀತ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಮೇ 14 ರಂದು ತನ್ನ ಮಗ, ಮಕ್ಕಳೊಂದಿಗೆ ಆತನ ಹೆಂಡತಿಯ ಅಕ್ಕನ ಮನೆಗೆ ಹೋಗಿ ಬರುವುದಾಗಿ ತಿಳಿಸಿ ಹೋಗಿರುತ್ತಾರೆ. ಮನೆಯಲ್ಲಿ ನಾನು ಹಾಗೂ ಗಂಡ ವಲೇರಿಯನ್ ಡಿಸೋಜಾ ಮಾತ್ರ ಇದ್ದೆವು. ಮೇ 15 ರಂದು ಬೆಳಿಗ್ಗೆ 6 ಗಂಟೆಗೆ ನಾನು ಮಡಂತ್ಯಾರು ಚರ್ಚ್ ಗೆ ಹೋಗಿ ಬೆಳಿಗ್ಗೆ 7:30ಕ್ಕೆ ಮನೆಗೆ ವಾಪಾಸು ಬಂದು ಗಂಡನನ್ನು ಕರೆದಾಗ ಪ್ರತ್ಯುತ್ತರ ಇಲ್ಲದುದರಿಂದ ಮನೆಯ ಒಳಗಡೆ ಹೊರಗಡೆ ಹುಡುಕಿದಾಗ ಗಂಡ ವಲೇರಿಯನ್ ಡಿಸೋಜಾ ರವರು ಮನೆಯ ಹಿಂಬದಿಯಲ್ಲಿ ಇರುವ 2 ಕಿಟಕಿಯ ಸನ್ ಡ್ಯಾಪ್ ನ ಮದ್ಯೆ ಇಟ್ಟಿದ್ದ ಮರದ ಪಕ್ಕಾಸಿ ಮದ್ಯಭಾಗಕ್ಕೆ ನೈಲಾನ್ ಹಗ್ಗವನ್ನು ಬಿಗಿದು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಇತ್ತಿಚೇಗೆ ಗ್ಯಾಸ್ಟ್ರಿಕ್ ಮೂಲವ್ಯಾಧಿ, ಹಾಗೂ ವಿಪರೀತ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಇದೇ ಕಾರಣಕ್ಕೆ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಧರ್ಮಸ್ಥಳ: ನೀರಚಿಲುಮೆ ಬಸ್ ಸ್ಟ್ಯಾಂಡಿನ ಬಳಿ ಹೆದ್ದಾರಿ ಬದಿಯಲ್ಲಿ ಕುಸಿದ ರಸ್ತೆ

Suddi Udaya

ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷರಾಗಿ ವಿಮಲ, ಉಪಾಧ್ಯಕ್ಷರಾಗಿ ಶ್ರೀನಿವಾಸ್ ರಾವ್ ಆಯ್ಕೆ

Suddi Udaya

ಉಜಿರೆ: ಶ್ರೀ.ಧ.ಮಂ. ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ತಡೆಗಟ್ಟುವಿಕೆ ಮತ್ತು ಜಾಗೃತಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಹಾಗೂ ಬಂಗಾಡಿ ವಲಯ ಮಟ್ಟದ ಪ್ರಾಥಮಿಕ ಶಾಲಾ ಬಾಲಕ ಬಾಲಕಿಯರ ಕ್ರೀಡಾಕೂಟ: ಬೆಳ್ತಂಗಡಿ ಹೋಲಿ ರಿಡೀಮರ್ ಶಾಲಾ ವಿದ್ಯಾರ್ಥಿಗಳಿಗೆ ಹಲವು ಬಹುಮಾನ

Suddi Udaya

ಮಡಂತ್ಯಾರು ಗ್ರಾ.ಪಂ ಮಾಜಿ ಸದಸ್ಯ ಸತೀಶ್ ಶೆಟ್ಟಿ ಕುರ್ಡುಮೆ ನಿಧನ

Suddi Udaya

ಬಂದಾರು ಗ್ರಾಮ ಪಂಚಾಯತ್ ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

Suddi Udaya
error: Content is protected !!