ತಾಲೂಕಿನ ಯುವ ಮೋರ್ಚಾ ಅಧ್ಯಕ್ಷನ ಬಂಧನಕ್ಕೆ ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ತೀವ್ರ ಖಂಡನೆ

Suddi Udaya

ಬೆಳ್ತಂಗಡಿ : ಅಕ್ರಮ ಕಲ್ಲು ಕೋರೆ ದಾಳಿ ಪ್ರಕರಣದಲ್ಲಿ ಭಾಗಿಯಾಗದೆ ಇರುವ ವ್ಯಕ್ತಿಯನ್ನು ಸುಖಾ ಸುಮನ್ನೇ ಪ್ರಕರಣದಲ್ಲಿ ಸೇರಿಸಿ, ನಮ್ಮ ತಾಲೂಕಿನ ಯುವ ನಾಯಕನ ಬಂಧನ ರಾಜಕೀಯ ಪ್ರೇರಿತ ಬಂಧನವಾಗಿದೆ ಎಂದು ಭಾರತೀಯ ಮಜ್ದೂರು ಸಂಘದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ಖಂಡಿಸಿದ್ದಾರೆ.

ಈ ಬಂಧನವನ್ನು ನೋಡುವಾಗ ನಮ್ಮ ತಾಲೂಕಿನಲ್ಲಿ ತಮ್ಮ ಸ್ವಾರ್ಥದ ರಾಜಕಾರಣಕ್ಕಾಗಿ ಬೆಳ್ತಂಗಡಿಯಲ್ಲಿ ಅಶಾಂತಿ, ದ್ವೇಷದ ವಿಷ ಬೀಜ ಬಿತ್ತುವ ಕಾರ್ಯಕ್ಕೆ ರಾಜಕಾರಣಿಗಳು ಕೈ ಹಾಕಿದ ಹಾಗೇ ಅಜ್ಜಿ, ನಿಮ್ಮ ದ್ವೇಷದ ರಾಜಕಾರಣವನ್ನು ಬಿಟ್ಟು ನೈಜ ರಾಜಕಾರಣ ಮಾಡಿ ಎಂದು ಒತ್ತಾಯ ಮಾಡುತ್ತಾ ಇದ್ದೇನೆ, ಸುಂದರ, ನವ ಬೆಳ್ತಂಗಡಿಗೆ ಕಳಂಕ ತರುವ ಕೆಲಸ ಕಾರ್ಯವನ್ನು ಯಾರೂ ಮಾಡಬೇಡಿ, ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಬಂದೇ ಬರುತ್ತೆ, ನಮ್ಮ ಪರಿವಾರದ ಕಾರ್ಯಕರ್ತನ ಬಂಧನಕ್ಕೆ ನಾವೆಲ್ಲರೂ ಒಟ್ಟಾಗಿ ಖಂಡಿಸುತ್ತೇವೆ.

Leave a Comment

error: Content is protected !!