ಏಕಾಏಕಿ ವಾಹನದ ಮುಂಭಾಗಕ್ಕೆ ಹಾರಿ ರಸ್ತೆ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

Suddi Udaya

ಬೆಳ್ತಂಗಡಿ : ಏಕಾ ಏಕಿ ವಾಹನದ ಮುಂಭಾಗಕ್ಕೆ ಹಾರಿ ರಸ್ತೆ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಉತ್ತರ ಪ್ರದೇಶದ ಉಚ್ಚವ್ ಪುರೈ ನಿ, ಉಜ್ವ ಕಾಲಿಪ್ಪರಾ ಭರಾಯಿಚ್ ನಿವಾಸಿ ಅನಿಲ್ ಚೌಹಾಣ್ ಎಂಬವರು ಮೇ 22 ರಂದು ಅವರ ಸಂಸ್ಥೆಯ ಬಾಬ್ತು ವಾಹನದಲ್ಲಿ ಗುರುವಾಯನಕೆರೆಯಿಂದ ಉಜಿರೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ ಸಮಯ ಮಧ್ಯಾಹ್ನ ಬೆಳ್ತಂಗಡಿ ಕಸಬಾ ಗ್ರಾಮದ ಲೋಬೋ ಮೋಟರ್ಸ್ ಅಂಗಡಿಯ ಮುಂಭಾಗ ಬರುತ್ತಿದ್ದಂತೆ ಎಡಬದಿಯಲ್ಲಿ ನಿಂತಿದ್ದ ಅನ್ಸಿ ಅಗೇರಿಯಾ ಎಂಬಾತನು ಒಮ್ಮೆಲೆ ಏಕಾ ಎಕಿ ಪಿರ್ಯಾದಿದಾರರ ವಾಹನದ ಮುಂಭಾಗಕ್ಕೆ ಹಾರಿ ರಸ್ತೆ ಗೆ ಬಿದ್ದಾಗ ಅಲ್ಲಿ ಸೇರಿದ ಸಾರ್ವಜನಿಕರ ಸಹಾಯದಿಂದ ಆತನನ್ನು ಎತ್ತಿ ಉಪಚರಿಸಿ ನೋಡಲಾಗಿ ಸದ್ರಿ ವ್ಯಕ್ತಿಯ ಸೊಂಟದಿಂದ ಕೆಳಗೆ ಸಂಪೂರ್ಣ ಜಖಂಗೊಂಡು ಅಸ್ವಸ್ಥನಾಗಿದ್ದವನನ್ನು ಅಲ್ಲಿ ಸೇರಿದವರು ಆಟೋ ವೊಂದರಲ್ಲಿ ಚಿಕಿತ್ಸೆ ಬಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಯಲ್ಲಿರುತ್ತಾ ಫಲಕಾರಿಯಾದೆ ಸಂಜೆ ಮೃತಪಟ್ಟಿರುವುದಾಗಿ ವರದಿಯಾಗಿದೆ .

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣಾ ಯು ಡಿ ಆರ್ ನಂ 22/2024 ಕಲಂ; 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

Leave a Comment

error: Content is protected !!