ಕೊಕ್ಕಡ: ಅನಂತರಾಮ ಉಪ್ಪಾರ್ಣ ನಿಧನ

Suddi Udaya

ಕೊಕ್ಕಡ: ಕೊಕ್ಕಡ ಗ್ರಾಮದ ಉಪ್ಪಾರು ಮನೆಯ ಅನಂತರಾಮ ಉಪ್ಪಾರ್ಣ (95 ವ) ಅಲ್ಪಕಾಲದ ಅಸೌಖ್ಯದಿಂದ (ಇಂದು)ಮೇ 23ರ ಮುಂಜಾನೆ ನಿಧನರಾದರು.

ಮೃತರು ಪುತ್ರರಾದ ನೆಲ್ಯಾಡಿ ಶ್ರೀನಿಧಿ ಫೈನಾನ್ಸ್ ಮತ್ತು ಶ್ರೀನಿಧಿ ಬಯೋಪ್ಲೇಟ್ಸ್ ಮಾಲಕ ಸುಬ್ರಹ್ಮಣ್ಯ ಉಪ್ಪಾರ್ಣ, ಶ್ರೀನಿಧಿ ಪ್ರಿಂಟರ್ಸ್ ಮತ್ತು ಗ್ರಾಫಿಕ್ಸ್ ನ ಮಾಲಕ ರಾಜೇಂದ್ರ ಪ್ರಸಾದ್ ಉಪ್ಪಾರ್ಣ, ಬೆಂಗಳೂರು ವಿದ್ಯಾಪೀಠದಲ್ಲಿ ಅರ್ಚಕರಾಗಿರುವ ಶ್ರೀನಿವಾಸ ಮೂರ್ತಿ ಉಪ್ಪಾರ್ಣ ಹಾಗೂ ಮೂವರು ಪುತ್ರಿಯರಾದ ಮಾಧವಿ, ಮಂಜುಳಾ, ಭಾರತಿ ಮತ್ತು ಸೊಸೆಯಂದಿರಾದ ನಿರ್ಮಲ, ಮಮತಾ, ಸುಜಾತ ಸೇರಿದಂತೆ ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.

Leave a Comment

error: Content is protected !!