ಬಂಗೇರ ಕುಟುಂಬಸ್ಥರಿಂದ ಸಿ. ಎಂ, ಡಿ. ಸಿ. ಎಂ ಭೇಟಿ – ಕೃತಜ್ಞತೆ ಸಲ್ಲಿಕೆ

Suddi Udaya

ಮಾಜಿ ಶಾಸಕರಾದ ಕೆ. ವಸಂತ ಬಂಗೇರ ಅಂತಿಮ ವಿಧಿ ವಿಧಾನ ಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಸಲು ಅನುವು ಮಾಡಿಕೊಟ್ಟು, ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನುಡಿನಮನ ಸಲ್ಲಿಸಿದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಸಿದ್ದರಾಮಯ್ಯ ರವರನ್ನು ಈ ದಿನ ಧರ್ಮಸ್ಥಳದಲ್ಲಿ ಬಂಗೇರ ಕುಟುಂಬದ ಸದಸ್ಯರು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು.

ಇದೇ ಸಂಧರ್ಭದಲ್ಲಿ ಉಪ ಮುಖ್ಯಮಂತ್ರಿಗಳಾದ ಡಿ. ಕೆ ಶಿವಕುಮಾರ್ ರವರನ್ನು ಸಹ ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದರು. ವಸಂತ ಬಂಗೇರರ ಪುತ್ರಿಯರಾದ ಪ್ರೀತಿತಾ ವಿ ಬಂಗೇರ, ಬಿನುತಾ ಬಂಗೇರ, ಅಳಿಯoದಿರಾದ ಧರ್ಮವಿಜೇತ್, ಸಂಜೀವ ಕನೇಕಲ್, ಮೊಮ್ಮಕ್ಕಳಾದ ವೇದಾಂತ್ ಸುಬ್ರಮಣ್ಯ, ಪೂರ್ವಿಕ, ಸೋದರನ ಪುತ್ರ ಅನೂಪ್ ಬಂಗೇರ ಮತ್ತು ಅಪರ ಸರ್ಕಾರಿ ವಕೀಲ ಮನೋಹರ ಕುಮಾರ್, ಇಳಂತಿಲ ಜೊತೆಗಿದ್ದರು.

Leave a Comment

error: Content is protected !!