ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಒಂದೇ ದಿನ 4300ರಷ್ಟು ಅವಲಕ್ಕಿ ಪಂಚಕಜ್ಜಾಯದ ಸೇವೆ

Suddi Udaya

ಕೊಕ್ಕಡ: ಎರಡು ದಿನಗಳ ಸರಣಿ ರಜೆ ಹಾಗೂ ಶಾಲಾ ಮಕ್ಕಳ ಬೇಸಗೆ ರಜೆ ಕೊನೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕರಾವಳಿಯ ತೀರ್ಥಕ್ಷೇತ್ರಗಳು ಹಾಗೂ ಪ್ರವಾಸಿ ತಾಣಗಳು ಪ್ರವಾಸಿಗರಿಂದ ಜನಸಂದಣಿ ಹೆಚ್ಚಾಗಿತ್ತು.

ಪ್ರಸಿದ್ಧ ದೇವಸ್ಥಾನವಾದ ಗಂಟೆ ಗಣಪತಿ ಎಂದೇ ಖ್ಯಾತಿ ಪಡೆದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ 50,000ದಷ್ಟು ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ಭಾನುವಾರ ಒಂದೇ ದಿನ 4300ರಷ್ಟು ಅವಲಕ್ಕಿ ಪಂಚಕಜ್ಜಾಯದ ಸೇವೆ ನೆರವೇರಿರುತ್ತದೆ. ಬೆಳಗ್ಗಿನ ಜಾವದಿಂದ ಸಂಜೆಯ ತನಕವೂ ಭಕ್ತರ ಸರದಿ ಸಾಲು ರಸ್ತೆ ವರೆಗೆ ಇತ್ತು. ದಾರಿಯುವುದಕ್ಕೂ ಅಧಿಕ ವಾಹನಗಳ ಸಂಚಾರದಿಂದಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.

Leave a Comment

error: Content is protected !!