ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದವರಿಂದ ಎರಡು ಕುಟುಂಬಕ್ಕೆ ಸಹಾಯಹಸ್ತ

Suddi Udaya

ಕೊಕ್ಕಡ: ಕಳೆಂಜ ಗ್ರಾಮದ ಕಾಂತ್ರೇಲು ನಿವಾಸಿ ಅರುಣ ತನ್ನ ಇಳಿ ವಯಸ್ಸಿನ ತಾಯಿ ಸುಂದರಿಯನ್ನು ಸಾಕುವ ಸಲುವಾಗಿ ಮದುವೆಯಾಗದೆ ಉಳಿದು ಕೂಲಿ ಕೆಲಸ ಮಾಡಿ ಬದುಕುತ್ತಿದ್ದು ಇತ್ತೀಚೆಗೆ ಅರುಣ ಎಂಬವರು ಕಾಯಿಲೆಗೆ ತುತ್ತಾಗಿದ್ದು ಅವರ ಚಿಕಿತ್ಸೆಗೆ 45,000/-ರೂ ಹಾಗೂ ಕಳೆಂಜ ಗ್ರಾಮದ ಶಿಬರಾಜೆ ಪಾದೆ ನಿವಾಸಿ 80 ವರ್ಷ ಪ್ರಾಯದ ಸೀತಮ್ಮ ಅನಾರೋಗ್ಯ ಪೀಡಿತರಾಗಿರುತ್ತಾರೆ. ಅವರ ಮಗಳು ಜಯಂತಿ(60 ವರ್ಷ) ಜಾರಿ ಬಿದ್ದು ಕಾಲಿನ ಶಸ್ತ್ರಕ್ರಿಯೆಗೆ ಒಳಪಟ್ಟು ಮನೆಯಲ್ಲಿರುತ್ತಾರೆ. ಜಯಂತಿ ಯವರ ಮಗ ಅಶ್ವತ್ ಮರದಿಂದ ಬಿದ್ದು ಕಾಲಿನ ಶಸ್ತ್ರ ಚಿಕಿತ್ಸೆಗೊಳಗಾಗಿ ಮನೆಯಲ್ಲಿರುತ್ತಾರೆ, ಇವರ ಚಿಕಿತ್ಸೆಗೆ 30.000/-ರೂ ಮೊತ್ತದ ಹಣವನ್ನು ಕಳೆಂಜ ಕ್ರಿಶ್ಚಿಯನ್ ಬ್ರದರ್ಸ್ ತಂಡದವರು ಸಂಘದ ಸದಸ್ಯರಿಂದ ಮತ್ತು ಊರ, ಪರಊರ ದಾನಿಗಳಿಂದ ಸಂಗ್ರಹಿಸಿ ಹಸ್ತಾಂತರಿಸಿದರು.

Leave a Comment

error: Content is protected !!