ನಿಡ್ಲೆ: ಕಳೆಂಜ ಶೌರ್ಯ ಘಟಕದಿಂದ ಮನೆಯ ಮೇಲೆ ಬಿದ್ದ ಮರ ತೆರವು

Suddi Udaya

ಕೊಕ್ಕಡ: ಕೊಕ್ಕಡ ವಲಯದ ಬರೆಂಗಾಯ ಕಾರ್ಯಕ್ಷೇತ್ರದ ಕಳೆಂಜ ಗ್ರಾಮದ ಕರ್ಮಾಜೆ ಬಾಬು ಎಂಬವರ ಮನೆಯ ಮೇಲೆ ದೊಡ್ಡ ಗಾತ್ರದ ಮರ ಬಿದ್ದಿದು, ಅದನ್ನು ನಿಡ್ಲೆ ಕಳೆಂಜ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ತೆರವುಗೊಳಿಸಿದರು.


ಘಟಕದ ಸ್ವಯಂ ಸೇವಕರಾದ ಉಮೇಶ್, ಆನಂದ, ವಿನಯಚಂದ್ರ, ಚಂದ್ರಶೇಖರ, ಜನಾರ್ಧನ, ಕರುಣಾಕರ, ಆನಂದ ಎಂ.ಕೆ, ಘಟಕ ಪ್ರತಿನಿಧಿ ಗಿರೀಶ್, ಸಂಯೋಜಕ ಕಳೆಂಜ ಗ್ರಾ.ಪಂ.ಉಪಾಧ್ಯಕ್ಷ ಮಂಜುನಾಥ, ಪಂ.ಸದಸ್ಯರು ಹರೀಶ, ಮಮತಾ 2ನೇ ವಾರ್ಡ್ ಬೂತ್ ಅಧ್ಯಕ್ಷರು, ಕಾರ್ಯದರ್ಶಿ ಸಹಕರಿಸಿದರು.

Leave a Comment

error: Content is protected !!