ಉರುವಾಲು : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾರಿಂಜ ಬೈತಾರು ಉರುವಾಲು ಇಲ್ಲಿ ಸಂಭ್ರಮದಿಂದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ನಡೆಯಿತು.
ಒಂದನೇ ತರಗತಿಗೆ ದಾಖಲಾದ ವಿದ್ಯಾರ್ಥಿಗಳನ್ನು ಬಲೂನು ಹಾಗೂ ಹೂ ವನ್ನು ನೀಡಿ ಸ್ವಾಗತಿಸಲಾಯಿತು.ಸರಕಾರದ ಉಚಿತ ಕೊಡುಗೆಯಾದ ಸಮವಸ್ತ್ರ ಹಾಗೂ ಪಠ್ಯ ಪುಸ್ತಕ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗಿರಿಜ, ಸಹಶಿಕ್ಷಕರಾದ ಪರಮೇಶ್ವರ ಯಸ್, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಜಗನ್ನಾಥ ರೈ ನೀನಿ, ಉಪಾಧ್ಯಕ್ಷೆ ಶ್ರೀಮತಿ ಕುಸುಮ ,ಅಂಗನವಾಡಿ ಕಾರ್ಯಕರ್ತೆ ಶಶಿಪ್ರಭ, ದಾನಿಗಳಾದ ದಾಸಪ್ಪ ಗೌಡ ಕೋಡಿಯಡ್ಕ , ನಿವೃತ್ತ ಸೈನಿಕ ಜೆ ಕೆ ಪೂಜಾರಿ, ಹಾಗೂ ಸಮಿತಿ ಸದಸ್ಯರು ಪೋಷಕರು ಹಾಗೂ ಊರವರು ಹಾಜರಿದ್ದರು.