30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ ಶ್ರೀ ರಾಘವೇಂದ್ರ ಮಠಕ್ಕೆ ಶಿರೂರು ಪೀಠಾಧಿಪತಿಗಳ ಭೇಟಿ: ಅಳದಂಗಡಿಯ ಶ್ರೀನಾಥ್ ಜೋಶಿಯವರಿಂದ ದೀಪಗಳ ಸಮರ್ಪಣೆ

ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಮಠಕ್ಕೆ ಶ್ರೀಮಾನ್ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಉಡುಪಿ ಶಿರೂರು ಮಠದ ಪ್ರಸ್ತುತ ಶ್ರೀ ಮಠದ ಪೀಠಾಧಿಪತಿಗಳಾದ ವೇದವರ್ಧನ ಶ್ರೀಪಾದಂಗಳವರು ಮೇ 30ರಂದು ಆಗಮಿಸಿದರು.

ಅವರನ್ನು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೆರಾಜೆ, ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಕೋಶಾಧಿಕಾರಿಗಳಾದ ವಸಂತ ಸುವರ್ಣ, ಜೊತೆ ಕಾರ್ಯದರ್ಶಿ ಶಂಕರ ಹೆಗಡೆ, ಕೃಷ್ಣ ಶೆಟ್ಟಿ, ಜಯರಾಮ ಬಂಗೇರ, ಸುರೇಶ್ ಶೆಟ್ಟಿ ಹಾಗೂ ಇತರ ಗಣ್ಯರು ಕ್ಷೇತ್ರದ ಮುಖ್ಯ ಪುರೋಹಿತರಾದ ರಾಘವೇಂದ್ರ ಬಾಂಗೀಣ್ಣಾಯರವರ ನೇತೃತ್ವದಲ್ಲಿ ಸ್ವಾಗತಿಸಿದರು.

ರಾತ್ರಿ ಮಠದ ಪಟ್ಟದ ದೇವರ ತೊಟ್ಟಿಲು ಪೂಜಾ ಕಾರ್ಯಕ್ರಮದ ನಂತರ ಕ್ಷೇತ್ರದಲ್ಲಿ ಮುಕ್ಕಾಂ ಹೂಡಿದ್ದು, ಇಂದು(ಮೇ 31) ಮಧ್ಯಾಹ್ನ 12ಕ್ಕೆ ಶ್ರೀದೇವರ ಸಂಸ್ಥಾನ ಪೂಜೆ ನಡೆಯಲಿದೆ.

ಈ ವೇಳೆ ಕ್ಷೇತ್ರಕ್ಕೆ ಅಳದಂಗಡಿಯ ಸೂಳಬೆಟ್ಟು ನಿವಾಸಿ ಕಸ್ತೂರಿ ಟಿವಿ ವಾಹಿನಿಯ ನಿರೂಪಕ ಶ್ರೀನಾಥ ಜೋಶಿ ಅವರು ತಮ್ಮ ಮಾತೃಶ್ರೀಯೊಂದಿಗೆ ಆಗಮಿಸಿ ತಮ್ಮ ಹರಕೆಯೊಂದಿಗೆ ದೀಪಗಳನ್ನು ಸಮರ್ಪಿಸಿದರು.

Related posts

ಸುಯ೯ ಕಂಗ್ಲಿತ್ತಿಲು ನಿವಾಸಿ ಸುಜಾತ ನಿಧನ

Suddi Udaya

ಪ್ರಧಾನಿ ನರೇಂದ್ರ ಮೋದಿಯವರ ದೀರ್ಘಾಯುಷ್ಯಕ್ಕಾಗಿ ಬೆಳ್ತಂಗಡಿ ಬಿಜೆಪಿ ಮಹಿಳಾ ಮೋರ್ಚಾದಿಂದ ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ಕಂಪ್ಯೂಟ‌ರ್ ತರಬೇತಿಯ ಪ್ರಮಾಣ ಪತ್ರ ವಿತರಣೆ

Suddi Udaya

ದ.ಕ. ಲೋಕಸಭಾ ಚುನಾವಣೆಯಲ್ಲಿ ಭಾರೀ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕ್ಯಾ| ಬ್ರಿಜೇಶ್ ಚೌಟ ಗೆಲುವು

Suddi Udaya

ನಾರಾವಿ: ಮಧುವನ ಕಾಂಪ್ಲೆಕ್ಸ್ ನಲ್ಲಿ ವಕ್ರಾಂಗಿ ಯುಪಿಐ ಮಿನಿ ಎಟಿಎಂ ಕೇಂದ್ರ ಶುಭಾರಂಭ

Suddi Udaya

ಮಾ.31-ಎ.4: ಸುಲ್ಕೇರಿ ನಾವರ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ: ಮಾ.31 ವೈಭವಯುತ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

Suddi Udaya
error: Content is protected !!