ಉಜಿರೆ ವಿಪತ್ತು ಘಟಕದಿಂದ ಶಾಲಾ ಪ್ರಾರಂಭೋತ್ಸವದ ದಿನದಂದೆ ಕಲ್ಮಂಜ ಶಾಲೆಯ ಕುಡಿಯುವ ನೀರಿನ ಬಾವಿಯ ಸ್ವಚ್ಛತೆ

Suddi Udaya

ಉಜಿರೆ: ಕಲ್ಮಂಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದ ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ಘಟಕದ ಸದಸ್ಯರಿಂದ ಕುಡಿಯುವ ನೀರಿನ ಬಾವಿಯ ಸ್ವಚ್ಛತೆ ಯನ್ನು ಮಾಡಿದರು.

ಈ ವೇಳೆ ಶಾಲೆ ಪ್ರಾರಂಭ ಕಾರಣ ಶಾಲೆಯ ಮುಖ್ಯ ದ್ವಾರಕ್ಕೆ ತಳಿರು ತೋರಣವನ್ನು ಕಟ್ಟುವ ಕೆಲಸವನ್ನು ವಿಪತ್ತು ಘಟಕದಿಂದ ವಹಿಸಿದರು.,

ಈ ಸಂದರ್ಭದಲ್ಲಿ ಘಟಕದ ಕ್ಯಾಪ್ಟನ್ ಸಂತೋಷ ಮಾಚಾರು, ಸ್ವಯಂಸೇವಕರಾದ ರವೀಂದ್ರ, ಸುದೀರ್ ,ರಾಘವೇಂದ್ರ, ಸಚಿನ್ ಬಿಢೆಯವರು ಉಪಸ್ಥಿತರಿದ್ದು ಈ ಕಾರ್ಯದಲ್ಲಿ ತೊಡಗಿಸಿಕೊಂಡರು.

ಶಾಲಾ ಮುಖ್ಯೋಪಾಧ್ಯಾಯರು, ಶಾಲಾ ವ್ಯವಸ್ಥಾಪನ ಸಮಿತಿಯವರು, ಪಿ. ಡಿ.ಓ ರವರು ವಿಪತ್ತು ತಂಡಕ್ಕೆ ಅಭಿನಂದಿಸಿದರು.

Leave a Comment

error: Content is protected !!