ನೆರಿಯ ವಾಲ್ಮೀಕಿ ಆಶ್ರಮ ಶಾಲೆಯ ಶಿಕ್ಷಕ ಕೃಷ್ಣಪ್ಪರಿಗೆ ಬೀಳ್ಕೊಡುಗೆ

Suddi Udaya

ಬೆಳ್ತಂಗಡಿ: ಸಮಾಜ ಕಲ್ಯಾಣ ಇಲಾಖೆಯಲ್ಲಿ ನೆರಿಯ ವಾಲ್ಮೀಕಿ ಆಶ್ರಮ ಶಾಲೆಯ ಶಿಕ್ಷಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಕೃಷ್ಣಪ್ಪ. ಎ ಅವರು ಮೇ 31ರಂದು ನಿವೃತ್ತಿ ಹೊಂದಿದ್ದು, ಅವರ ಬೀಳ್ಕೊಡುಗೆ ಸಮಾರಂಭ ಜರುಗಿತು.


ಅಧ್ಯಕ್ಷತೆಯನ್ನು ಬೆಳ್ತಂಗಡಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೇಮಚಂದ್ರ ವಹಿಸಿದ್ದರು.

ಸಮಾರಂಭದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರು ಮುರಳೀಧರ್, ಕಚೇರಿ ಅಧೀಕ್ಷಕ ಧನಂಜಯ, ಅಶೋಕ್ ದೇವಾಡಿಗ ತಾಲೂಕ್ ಪಂಚಾಯತ್ ಲೆಕ್ಕ ಶಾಖೆ ಉಪಸ್ಥಿತರಿದ್ದರು.

ಅಳದಂಗಡಿ ವಿದ್ಯಾರ್ಥಿನಿ ನಿಲಯ ಮೇಲ್ವಿಚಾರಕರು ಹೇಮಲತಾ ಸ್ವಾಗತಿಸಿದರು. ವಾಲ್ಮೀಕಿ ಆಶ್ರಮ ಶಾಲೆ ನೆರಿಯ, ಶಿಶಿಲ, ನಾರಾವಿ., ಶಿಕ್ಷಕರ, ಸಿಬ್ಬಂದಿಗಳು ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿದ್ದರು.

Leave a Comment

error: Content is protected !!