ಬೆಳ್ತಂಗಡಿ ಶ್ರೀ ರಾಘವೇಂದ್ರ ಮಠದಲ್ಲಿ ಶಿರೂರು ಮಠದ ಪೀಠಾಧಿಪತಿಗಳಿಂದ ವಿಶೇಷ ಪ್ರವಚನ

Suddi Udaya

ಬೆಳ್ತಂಗಡಿ ಶ್ರೀ ರಾಘವೇಂದ್ರ ಮಠಕ್ಕೆ ಉಡುಪಿ ಶಿರೂರು ಮಠದ ಪ್ರಸ್ತುತ ಪೀಠಾಧಿಪತಿಗಳಾದ ವೇದವರ್ಧನ ಶ್ರೀಪಾದಂಗಳವರು ಆಗಮಿಸಿ ಮಠದಲ್ಲಿ ಮುಕ್ಕಾಂ ಹೂಡಿದರು ಮೇ 31ರಂದು ರಾಯರ ಮಠದಲ್ಲಿ ವಿಶೇಷ ಪ್ರವಚನದ ಮುಖಾಂತರ ಭಕ್ತರಿಗೆ ಆಶೀರ್ವಾದ ನೀಡಿದರು. ಪೂಜಾ ವಿಧಿ ವಿಧಾನದಲ್ಲಿ ಮಠದ ಅರ್ಚಕರಾದ ಶ್ರೀ ರಾಘವೇಂದ್ರ ಬಾಂಗಿಣ್ಣಾಯರವರು ಸಹಕರಿಸಿದರು.


ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾ ಪೀತಾಂಬರ ಹೆರಾಜೆ, ನಾರಾಯಣ ಬೇಗೂರು, ವಸಂತ ಸುವರ್ಣ, ಮಹಾಬಲ ಶೆಟ್ಟಿ, ಶಂಕರ ಹೆಗಡೆ, ಸೋಮೇಗೌಡ, ಜಯರಾಮ ಬಂಗೇರ, ಕೃಷ್ಣ ಶೆಟ್ಟಿ, ಸುರೇಶ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!