ಬೆಳ್ತಂಗಡಿ: ಹಳೆಕೋಟೆ ಸಮೀಪ ಟಿಪ್ಪರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಮೃತ್ಯು

Suddi Udaya

Updated on:

ಬೆಳ್ತಂಗಡಿ: ಬೆಳ್ತಂಗಡಿ ಹಳೇಕೋಟೆ ಸಮೀಪ ಪೆಟ್ರೋಲ್ ಪಂಪು ಬಳಿ ಟಿಪ್ಪರ್ ಹಾಗೂ ಬೈಕ್ ನಡುವೆ ಭೀಕರ ರಸ್ತೆ ಅಪಘಾತವಾಗಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಜೂ.1 ರಂದು ಮಧ್ಯಾಹ್ನ ನಡೆದಿದೆ.

ಬೈಕ್ ಸವಾರ ಬೆಳ್ತಂಗಡಿಯಿಂದ ಗುರುವಾಯನಕೆರೆ ಕಡೆ ಹೋಗುತ್ತಿದ್ದು ಟಿಪ್ಪರ್ ಸವಾರ ಟಿಪ್ಪರ್ ರಿವರ್ಸ್ ತೆಗೆಯುವ ಸಂದರ್ಭ ಈ ಘಟನೆ ನಡೆದಿದೆ. ಬೈಕ್ ಸವಾರ ಬಳ್ಳಮಂಜ ನಿವಾಸಿ ವಿನೋದ್ ಗೌಡ ಪಾಲಡ್ಕ ಮೃತಪಟ್ಟ ವ್ಯಕ್ತಿ. ಬೈಕ್ ಟಿಪ್ಪರ್ ಅಡಿಗೆ ಬಿದ್ದು ಬೈಕ್ ನಜ್ಜುಗುಜ್ಜಾಗಿದೆ.

Leave a Comment

error: Content is protected !!