27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿ

ಕಳಿಯ ಗ್ರಾ. ಪಂ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ವಿದ್ಯುತ್ ತಂತಿಗಳು ಅಪಾಯದ ಸ್ಥಿತಿಯಲ್ಲಿ :ಸೂಕ್ತ ಕ್ರಮಕ್ಕೆ ನಾಗರಿಕರ ಆಗ್ರಹ

ಪರಪ್ಪು- ಕೊಯ್ಯೂರು ರಸ್ತೆಯ ಪದಗೋಳಿ ಸಮೀಪ

—————————————————

ಗೇರುಕಟ್ಟೆ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಲವಾರು ಕಡೆಗಳಲ್ಲಿ ವಿದ್ಯುತ್ ತಂತಿಗಳು ಅಪಾಯದ ಸ್ಥಿತಿಯಲ್ಲಿ ಇದ್ದು, ಇದರ ಬಗ್ಗೆ ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಪರಪ್ಪು ರಸ್ತೆ ಬದಿಯ ಸಮೀಪದ ಸುಣ್ಣಲಡ್ಡ ಕಾಂಪ್ಲೆಕ್ಸ್ ಹತ್ತಿರದ ನೆಲಕ್ಕೆ ಹಾಕಿಕೊಂಡಿರುವ ಅಕೇಶಿಯ ಮರಕ್ಕೆ ತಂತಿ ತಾಗುವುದಕ್ಕೆ ಕೇವಲ (½)ಅರ್ಧ ಅಡಿ ಮಾತ್ರ ಇದೆ.

ಪರಪ್ಪು- ಕೊಯ್ಯೂರು ರಸ್ತೆಯ ಪದಗೋಳಿ ಸಮೀಪದ ಮಾರ್ಗ ಬದಿಯಲ್ಲಿ ರುವ ಅಪಾಯಕಾರಿ ಒಣಗಿದ ಮರವೊಂದಿದ್ದು, ಸಾವಿರಾರು ವಾಹನ, ಜನರು ಓಡಾಡುವ ಸ್ಥಳ ಇದಾಗಿದೆ.


ಪೆಲತ್ತಳಿಕೆ ಕಾಸಿಂ ಮನೆಯ ತೋಟದಲ್ಲಿ ಹಾಗೂ ಸಾರ್ವಜನಿಕ ಟಾರು ರಸ್ತೆಯ ಪಕ್ಕದಲ್ಲಿರುವ 3 ವರ್ಷಗಳ ಹಿಂದೆ ಒಣಗಿದ ಅಪಾಯದಲ್ಲಿರುವ ಮರವೊಂದಿದೆ.

ದೇರ್ಜಾಲು ಅನಂದ ಪೂಜಾರಿ ಯವರ ತೋಟದಲ್ಲಿ ಬಾಳೆ ಗಿಡ ಮತ್ತು ಹಲಸಿನ ಮರದ ಕೊಂಬೆಗಳು ವಿದ್ಯುತ್ ಸ್ಪರ್ಶಿಸಿ ಸುಟ್ಟು ಕರಕಲಾಗಿದೆ.

ರಕ್ತೇಶ್ವರಿಪದವು ಕ್ರಾಸ್ ರಸ್ತೆ ಮೇಲ್ಬಾಗದಲ್ಲಿ ತಂತಿಯ ಮೇಲೆ ಮರದ ಕೊಂಬೆ ತಾಗುತ್ತಿವೆ. (ಕಳೆದ ತಿಂಗಳು ಬೈ ಹುಲ್ಲಿನ ವಾಹನಕ್ಕೆ ಬೆಂಕಿ ತಗುಲಿದ ಹತ್ತಿರದ ಸ್ಥಳ),

ಪೇಲತ್ತಳಿಕ್ಕೆ ಮನೆಯ ಮುಂಭಾಗದಲ್ಲಿರುವ ತಂತಿಗಳು ಮರಕ್ಕೆ ತಾಗುತ್ತಿವೆ ಇದರ ಬಗ್ಗೆ ಮೆಸ್ಕಾಂ ಇಲಾಖೆ ಕ್ರಮ ಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರ

Related posts

ಶ್ರೀ ಧ.ಮಂ ಪ.ಪೂ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಕಲೋತ್ಸವ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಕಲ್ಮಂಜ ಸಂಗಮ ಕ್ಷೇತ್ರ ಪಜಿರಡ್ಕದಲ್ಲಿ ನೀರಿನ ಮಟ್ಟ ಏರಿಕೆ: ನಾಗನ ಕಟ್ಟೆ ಮುಳುಗಡೆಯಾಗುವ ಸಾಧ್ಯತೆ

Suddi Udaya

ಗುರುವಾಯನಕೆರೆ ಸ.ಹಿ.ಪ್ರಾ, ಶಾಲೆಯಲ್ಲಿ ಮಾನವ ಹಕ್ಕುಗಳ ಮಹತ್ವದ ಬಗ್ಗೆ ಮಾಹಿತಿ ಕಾರ್ಯಕ್ರಮ

Suddi Udaya

ಪೆರಿಂಜೆ : ಭಗವಾನ್ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ಮಂಗಲಪ್ರವಚನ

Suddi Udaya

ಉರುವಾಲು: ನೆಕ್ಕಿಲು ಶಾಲಾ ಮುಖ್ಯ ಶಿಕ್ಷಕ ಬಿ . ಎಸ್ . ಬಿರಾದಾರ್ ಬೀಳ್ಕೊಡುಗೆ ಸಮಾರಂಭ

Suddi Udaya
error: Content is protected !!