26.5 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳೆಂಜ ಬಿಜೆಪಿ ಮುಖಂಡನ ಮೇಲಿನ ಹಲ್ಲೆ ಕುರಿತು ಬಿಜೆಪಿ ಮಂಡಲ ವತಿಯಿಂದ ಪತ್ರಿಕಾಗೋಷ್ಠಿ

ಬೆಳ್ತಂಗಡಿ : ಬೆಳ್ತಂಗಡಿ ಅನೇಕ ನಾಯಕರುಗಳು ಶಾಸಕರಾಗಿ ಹೋದ ಕ್ಷೇತ್ರ ಆದರೆ ದ್ವೇಷ ರಾಜಕೀಯ ಇರಲಿಲ್ಲ. ವಸಂತ ಬಂಗೇರರು ಇರುವಾಗ ಈ ರೀತಿ ನಡೆದಿಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಹೇಳಿದರು.

ಅವರು ಜೂ.6ರಂದು ಗುರುವಾಯನಕೆರೆ ನವಶಕ್ತಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಕಳೆಂಜದಲ್ಲಿ ಎಸ್ ಟಿ ಮುಖಂಡ ರಾಜೇಶ್ ನ ಮೇಲಿನ ಹಲ್ಲೆಯ ಹಿಂದೆ ಕೊಲೆಯ ಪ್ರಯತ್ನ ನಡೆದಿದೆ ಎಂಬುವುದು ಸ್ಪಷ್ಟ. ಜಾತಿ ನಿಂದನೆಯನ್ನು ಕುಶಾಲಪ್ಪ ಗೌಡ ರವರು ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸನ್ನು ಹಾಕುವುದರ ಮೂಲಕ ಸುಳ್ಳಿನ ಕಂತೆಗಳ ಸುರಿಮಳೆ ಇವತ್ತು ಆಗುತ್ತಿದೆ. ಪರಿಶಿಷ್ಟ ಪಂಗಡದ ವ್ಯಕ್ತಿಗೆ ಈ ರೀತಿ ಮಾಡ್ತಾರೆ ಎಂದಾದರೆ ಇನ್ನೂ ಸಾಮಾನ್ಯ ಜನರ ಕಥೆ ಏನು?, ಈ ರೀತಿಯ ಕೀಳು ಮಟ್ಟದ ರಾಜಕೀಯವನ್ನು ನಾನು ನೋಡಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ರಾಜ್ಯ ಸಮಿತಿ ಸದಸ್ಯ ಕೊರಗಪ್ಪ ನಾಯ್ಕ, ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ, ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ ಉಪಸ್ಥಿತರಿದ್ದರು.

Related posts

ನಾಲ್ಕೂರು: ಅನಾರೋಗ್ಯದಿಂದ ಸುಶೀಲ ಜೈಮಾತಾ ನಿಧನ

Suddi Udaya

ಶಿರ್ಲಾಲು ವಿಶ್ವ ಹಿಂದೂ ಪರಿಷತ್‌ ವತಿಯಿಂದ ಆರ್ಥಿಕ ನೆರವು

Suddi Udaya

ಆ.12: ಬೆಳ್ತಂಗಡಿಯಲ್ಲಿ ರಾಜಕೇಸರಿ ಸೇವಾ ಟ್ರಸ್ಟ್ ವತಿಯಿಂದ ಆಟಿದ ಕಷಾಯ ಮತ್ತು ಮೆತ್ತೆಗಂಜಿ ವಿತರಣೆ

Suddi Udaya

ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯಲ್ಲಿ ‘ಮಗುವಿಗೊಂದು ಮರ’ ಕಲ್ಪನೆಯಂತೆ 200 ಗಿಡಗಳ ನಾಟಿ ಕಾರ್ಯಕ್ರಮ

Suddi Udaya

ಬದ್ರಿಯಾ ಜುಮ್ಮಾ ಮಸ್ಜಿದ್ ಉಜಿರೆ ಟೌನ್ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆ

Suddi Udaya

ಮುಗೇರಡ್ಕ ನೆಕ್ಕರಾಜೆ ನಿವಾಸಿ ವಿಶ್ವನಾಥ್ ಗೌಡ ನಿಧನ

Suddi Udaya
error: Content is protected !!