28 C
ಪುತ್ತೂರು, ಬೆಳ್ತಂಗಡಿ
August 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕಳೆಂಜ ಬಿಜೆಪಿ ಮುಖಂಡನ ಮೇಲಿನ ಹಲ್ಲೆ ಕುರಿತು ಬಿಜೆಪಿ ಮಂಡಲ ವತಿಯಿಂದ ಪತ್ರಿಕಾಗೋಷ್ಠಿ

ಬೆಳ್ತಂಗಡಿ : ಬೆಳ್ತಂಗಡಿ ಅನೇಕ ನಾಯಕರುಗಳು ಶಾಸಕರಾಗಿ ಹೋದ ಕ್ಷೇತ್ರ ಆದರೆ ದ್ವೇಷ ರಾಜಕೀಯ ಇರಲಿಲ್ಲ. ವಸಂತ ಬಂಗೇರರು ಇರುವಾಗ ಈ ರೀತಿ ನಡೆದಿಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಹೇಳಿದರು.

ಅವರು ಜೂ.6ರಂದು ಗುರುವಾಯನಕೆರೆ ನವಶಕ್ತಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಕಳೆಂಜದಲ್ಲಿ ಎಸ್ ಟಿ ಮುಖಂಡ ರಾಜೇಶ್ ನ ಮೇಲಿನ ಹಲ್ಲೆಯ ಹಿಂದೆ ಕೊಲೆಯ ಪ್ರಯತ್ನ ನಡೆದಿದೆ ಎಂಬುವುದು ಸ್ಪಷ್ಟ. ಜಾತಿ ನಿಂದನೆಯನ್ನು ಕುಶಾಲಪ್ಪ ಗೌಡ ರವರು ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸನ್ನು ಹಾಕುವುದರ ಮೂಲಕ ಸುಳ್ಳಿನ ಕಂತೆಗಳ ಸುರಿಮಳೆ ಇವತ್ತು ಆಗುತ್ತಿದೆ. ಪರಿಶಿಷ್ಟ ಪಂಗಡದ ವ್ಯಕ್ತಿಗೆ ಈ ರೀತಿ ಮಾಡ್ತಾರೆ ಎಂದಾದರೆ ಇನ್ನೂ ಸಾಮಾನ್ಯ ಜನರ ಕಥೆ ಏನು?, ಈ ರೀತಿಯ ಕೀಳು ಮಟ್ಟದ ರಾಜಕೀಯವನ್ನು ನಾನು ನೋಡಿಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಯಂತ ಕೋಟ್ಯಾನ್, ರಾಜ್ಯ ಸಮಿತಿ ಸದಸ್ಯ ಕೊರಗಪ್ಪ ನಾಯ್ಕ, ಬೆಳ್ತಂಗಡಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪ್ರಶಾಂತ್ ಪಾರೆಂಕಿ, ಜಯಾನಂದ ಗೌಡ, ಜಿಲ್ಲಾ ಕಾರ್ಯದರ್ಶಿ ವಸಂತಿ ಮಚ್ಚಿನ ಉಪಸ್ಥಿತರಿದ್ದರು.

Related posts

ದ‌.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ಧರ್ಮಸ್ಥಳ ಸಿಎ ಬ್ಯಾಂಕಿಗೆ ಸತತ 3 ನೇ ಬಾರಿಗೆ ಪ್ರೋತ್ಸಾಹಕ ಪ್ರಶಸ್ತಿ

Suddi Udaya

ಭರತನಾಟ್ಯ ವಿಧ್ವತ್ ಪೂರ್ವ ಪರೀಕ್ಷೆಯಲ್ಲಿ ಗುರುವಾಯನಕೆರೆಯ ಕು. ರಕ್ಷಾ ಶೆಣೈರವರಿಗೆ ಉತ್ತಮ ಶ್ರೇಣಿ

Suddi Udaya

ಅಳದಂಗಡಿ ಶ್ರೀ ಸತ್ಯ ದೇವತೆಗೆ ಹರಕೆ ರೂಪದಲ್ಲಿ ಗಗ್ಗರ ಸಮಪ೯ಣೆ

Suddi Udaya

ಕೊಕ್ಕಡ: 9/11 ಆದೇಶ ವಿರೋಧಿಸಿ ಪಂಚಾಯತ್ ಮಟ್ಟದಲ್ಲಿ ಅಥವಾ ಬೆಳ್ತಂಗಡಿ ತಾಲೂಕು ಕೇಂದ್ರದಲ್ಲಿ ಅನುಮೋದನೆ ನೀಡುವಂತೆ ನಿರ್ಣಯ

Suddi Udaya

ಧರ್ಮಸ್ಥಳ ಶಾಂತಿವನದಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ

Suddi Udaya

ಬಳಂಜ: ಬೊಳ್ಳಾಜೆ ಚೆಲುವಮ್ಮ ಪೂಜಾರ್ತಿ ನಿಧನ

Suddi Udaya
error: Content is protected !!