ರಾಷ್ಟ್ರೀಯ ತುಳು ಗುಡಿಗಾರ ಸಂಘ ದಕ್ಷಿಣ ಕನ್ನಡ ಮತ್ತು ಉಡುಪಿ ಇದರ ನೇತೃತ್ವದಲ್ಲಿ ಬೃಹತ್ ರಕ್ತದಾನ ಶಿಬಿರ

Suddi Udaya

ಬೆಳ್ತಂಗಡಿ: ರಾಷ್ಟ್ರೀಯ ತುಳು ಗುಡಿಗಾರ ಸಂಘ (ರಿ) ದಕ್ಷಿಣ ಕನ್ನಡ ಮತ್ತು ಉಡುಪಿ ಇದರ ನೇತೃತ್ವದಲ್ಲಿ ಜೂ.7ರಂದು ನಡೆದ ಬೃಹತ್ ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಮೆಡಿಕಲ್ ಆಫೀಸರ್ ಸುಕೇಶ್ ರಕ್ತದಾನ ಎಂಬುವುದು ಮಹಾದಾನ ಇದು ಮಾಡುವುದರಿಂದ ಮತೊಬ್ಬರ ಕಷ್ಟಕ್ಕೆ ದೊಡ್ಡ ರೀತಿಯಲ್ಲಿ ಸಹಾಯವಾಗುತ್ತದೆ. ಎಲ್ಲರೂ ರಕ್ತದಾನವನ್ನು ಮಾಡಿ ಆರೋಗ್ಯವಂತರಾಗಿ ಎಂದು ಪ್ರಥಮ ಹೆಜ್ಜೆಯಲ್ಲಿ ಶುಭವನ್ನು ಕೋರಿದರು.

ಈ ಸಂದರ್ಭದಲ್ಲಿ ಎಸ್.ಡಿ.ಎಮ್. ಆಸ್ಪತ್ರೆ ಉಜಿರೆಯ ಮೆಡಿಕಲ್ ಸೂಪರಿಡೆಂಟ್ ಡಾ| ದೇವೇಂದ್ರ ಕುಮಾರ್ , ಉಜಿರೆ ಎಸ್.ಡಿ.ಎಮ್ ಆಸ್ಪತ್ರೆ ಸಲಹೆಗಾರ ವೈದ್ಯರು ಡಾ| ಯಶಶ್ವಿನಿ ಮೋಹನ್ ಅಮೀನ್ , ರೆಡ್ ಕ್ರಾಸ್ ಸಂಸ್ಥೆಯ ಪ್ರಮುಖರಾದ ಪ್ರವೀಣ್ ಹಾಗೂ ರಾಷ್ಟ್ರೀಯ ತುಳು ಗುಡಿಗಾರ ಸಂಘ ದಕ್ಷಿಣ ಕನ್ನಡ ಇದರ ಅಧ್ಯಕ್ಷ ರವೀಂದ್ರ ಗುಡಿಗಾರ್, ಎಸ್.ಡಿಎಮ್. ಆಸ್ಪತ್ರೆ ಉಜಿರೆ ಎಲ್ಲಾ ಡಿಪಾರ್ಟ್ಮೆಂಟ್ ಮುಖ್ಯಸ್ಥರು, ತುಳು ಗುಡಿಗಾರ ಬಾಂಧವರು ಊರ ಮತ್ತು ಪರವೂರ ಬಾಂಧವರು ಹಾಗೂ ಎಸ್,ಡಿ,ಎಮ್ ಆಸ್ಪತ್ರೆಯ ಉದ್ಯೋಗಿಗಳು ಭಾಗವಹಿಸಿದರು.

Leave a Comment

error: Content is protected !!