ಕೇಲ್ತಾಜೆ ಸಿರಾಜುಲ್ ಹುದಾ ಮದರಸ ಮತ್ತು ಜುಮಾ ಮಸ್ಜಿದ್ ಇದರ ಅಧ್ಯಕ್ಷರಾಗಿ ಕೆ ಹನೀಫ್ ಪುನರಾಯ್ಕೆ

Suddi Udaya

ಬೆಳ್ತಂಗಡಿ: ಕೇಲ್ತಾಜೆ ಸಿರಾಜುಲ್ ಹುದಾ ಮದರಸ ಮತ್ತು ಜುಮಾ ಮಸ್ಜಿದ್ ಮಹಾಸಭೆಯಲ್ಲಿ 2024-25ನೇ ಸಾಲಿನ ಅಧ್ಯಕ್ಷರಾಗಿ ಕೆ ಹನೀಫ್, ಪ್ರಧಾನ ಕಾರ್ಯದರ್ಶಿಯಾಗಿ ಶರೀಫ್ ಸಖಾಫಿ ಕನ್ಯಾಡಿ, ಕೋಶಾಧಿಕಾರಿಯಾಗಿ ಅಬುಸಾಲಿ ಕೇಲ್ತಾಜೆ ಪುನರಾಯ್ಕೆಯಾದರು.

ಸಯ್ಯದ್ ಅಬೂಬಕ್ಕರ್ ಸಿದ್ದೀಕ್ ತಂಙಳ್ ಮುರ ತೀರ್ಥಹಳ್ಳಿ ಇವರು ಗೌರವಾಧ್ಯಕ್ಷ ಸ್ಥಾನವನ್ನು ವಹಿಸಿಕೊಂಡರು. ಉಪಾಧ್ಯಕ್ಷರಾಗಿ ಹಮೀದ್ ಕೆ.ಬಿ ಹಾಗೂ ಸದಸ್ಯರಾಗಿ ಅಬ್ದುಲ್ ಹಮೀದ್ ಟಿ, ಮಹಮ್ಮದ್ ಯು.ಕೆ, ಅಬೂಬಕ್ಕರ್ ಬಿ.ಎ, ಉಮರ್ ಫಾರೂಕ್ ಬಿ, ಮಹಮ್ಮದ್ ಪಾರ್ನಡ್ಕ, ಇಸುಬು ಬಿ.ಎ, ಅಶ್ರಫ್ ಪಾರ್ನಡ್ಕ, ಇವರನ್ನು ಮರು ಆಯ್ಕೆ ಮಾಡಲಾಯಿತು.

ಲೆಕ್ಕಪರಿಶೋದಕರಾಗಿ ಶಮೀಮ್ ಪಾರ್ನಡ್ಕ ಇವರನ್ನು ಮುಂದುವರೆಸಲಾಯಿತು. ಅಬುಸಾಲಿ ಝೈನಿ ದುಆ ನೆರವೇರಿಸಿದರು. ಕಾರ್ಯದರ್ಶಿ ಶರೀಫ್ ಸಖಾಫಿ ಸ್ವಾಗತಿಸಿ ವರದಿ ವಾಚಿಸಿದರು. ಹಮೀದ್ ಟಿ ಲೆಕ್ಕಪತ್ರ ಮಂಡಿಸಿದರು. ಇಸಾಕ್ ಮುಸ್ಲಿಯಾರ್ ಧನ್ಯವಾದವಿತ್ತರು.


Leave a Comment

error: Content is protected !!