ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸುರಕ್ಷಾ ಚೆಕ್ ವಿತರಣೆ

Suddi Udaya

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ ಉಜಿರೆ ವಲಯದ ಬೆಳಾಲು ಕಾರ್ಯಕ್ಷೇತ್ರದ ಶ್ರೀ ಮಂಡಲ PBG ಸಂಘದ ಸುಂದರ ಆಚಾರ್ ರವರಿಗೆ ಅಪಘಾತ ಆಗಿ ಹಾಸ್ಪಿಟಲ್ ಖರ್ಚು ಆಗಿದ್ದು ಶ್ರೀ ಕ್ಷೇತ್ರದ ಸುರಕ್ಷಾ ಯೋಜನೆಯಿಂದ ಸುಮಾರು ರೂ. 30,000/ ಮಂಜೂರಾಗಿದ್ದು ಈ ಮೊತ್ತ ಸುರಕ್ಷಾದಿಂದ ಮಂಜೂರಾಗಿದ್ದು ಸದ್ರಿ ಚೆಕ್ ನ್ನು ಬೆಳಾಲು -ಮಾಯಾ -ಕೊಲ್ಪಡಿ ಅಧ್ಯಕ್ಷರು ಒಕ್ಕೂಟದ ಪದಾಧಿಕಾರಿಯವರ ಉಪಸ್ಥಿತಿಯಲ್ಲಿ ವಿತರಣೆ ಮಾಡಿದರು.


ಈ ಸಂದರ್ಭದಲ್ಲಿ ಬೆಳಾಲು ಒಕ್ಕೂಟದ ಅಧ್ಯಕ್ಷ ರತ್ನಕರ, ಮಾಯಾ ಒಕ್ಕೂಟದ ಅಧ್ಯಕ್ಷ ಭುವನೇಶ್ ,ಕೊಲ್ಪಡಿ ಒಕ್ಕೂಟದ ಅಧ್ಯಕ್ಷೆ ನೀಲಾವತಿ, ನಿಕಟಪೂರ್ವ ಅಧ್ಯಕ್ಷ ಸಂಜೀವ, ಉಪಾಧ್ಯಕ್ಷ ಪ್ರಸಾದ್, ಒಕ್ಕೂಟದ ಪದಾಧಿಕಾರಿಯವರು, ಬೆಳಾಲು-ಕೊಲ್ಪಡಿ ಸೇವಾಪ್ರತಿನಿಧಿ ಹಾಗೂ ವಲಯಮೇಲ್ವಿಚಾರಕರು ಉಪಸ್ಥಿತರಿದ್ದರು.

Leave a Comment

error: Content is protected !!