26 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

ಬೆಳ್ತಂಗಡಿ: ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು, ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಜೂ.12 ರಂದು ಬೆಳ್ತಂಗಡಿ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಜನಸಂಪರ್ಕ ಸಭೆ ನಡೆಸಿ, ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿದರು.


ಮಂಗಳೂರು ಲೋಕಾಯುಕ್ತ ವಿಭಾಗದ ಎಸ್.ಪಿ ನಟರಾಜ್ ಎಂ.ಎ ಅಧ್ಯಕ್ಷತೆ ವಹಿಸಿದ್ದರು. ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಅಮನುಲ್ಲಾ ಎ. ಹಾಗೂ ಚಂದ್ರಶೇಖರ್ ಕೆ.ಎನ್ ಮತ್ತು ಚಂದ್ರಶೇಖರ್ ಸಿ.ಎಲ್, ಸಿಬ್ಬಂದಿಗಳಾದ ಮಹೇಶ್, ವಿನಾಯಕ್, ಡಿ.ಬಿ, ಪಾಪಣ್ಣ, ಧರ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.


ಸಭೆಯಲ್ಲಿ ಸಾರ್ವಜನಿಕರು ಸರಕಾರಿ ಇಲಾಖೆಗಳಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ದೂರುಗಳನ್ನು ನೀಡಿದರು. ಮರೋಡಿ ಕೂಕ್ರಬೆಟ್ಟುವಿನ ಸುಬ್ರಹ್ಮಣ್ಯ ಭಟ್, ಹರಿಶ್ಚಂದ್ರ ತಾಮ್ಹಣ್‌ಕರ್ ಪಿಲ್ಯ, ಅರಸಿನಮಕ್ಕಿಯ ರಾಜು ಕೆ.ಕೆ, ಬೆಳ್ತಂಗಡಿಯ ವಿ.ಆರ್ ನಾಯಕ್, ಹೊಸಂಗಡಿಯ ರಾಜೇಶ್, ತಾ.ಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ ಸೆಬಾಸ್ಟಿನ್ ನೆರಿಯ ಅವರು ವಿವಿಧ ವಿಷಯಗಳ ಬಗ್ಗೆ ದೂರು ನೀಡಿದರು. ಲೋಕಾಯುಕ್ತ ಅಧಿಕಾರಿಗಳು ದೂರನ್ನು ಸ್ವೀಕರಿಸಿ, ಕೆಲವೊಂದು ದೂರುಗಳ ಬಗ್ಗೆ ಕಂದಾಯ, ಸರ್ವೆ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿ ದೂರುದಾರರಿಗೆ ಮಾಹಿತಿ ನೀಡಿದರು.

Related posts

ಕಿಲ್ಲೂರು ಮುಖ್ಯ ರಸ್ತೆಯ ಸೇತುವೆ ಸುರಕ್ಷಿತಗೊಳಿಸಲು ಪ್ರತಿಭಟನೆ : ಕಿಲ್ಲೂರು ಮುಖ್ಯ ರಸ್ತೆಯ ಸೇತುವೆ ಸುರಕ್ಷಿತಗೊಳಿಸಲು ಪ್ರತಿಭಟನೆ : ಲೋಕೋಪಯೋಗಿ ಇಲಾಖೆಯ ಎಇಇ ಹಾಗೂ ಸಹಾಯಕ ಇಂಜಿನಿಯರ್ ರವರಿಗೆ ಮನವಿ

Suddi Udaya

ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿ ಆಶಿತಾ ಜೈನ್ ರವರಿಗೆ ರಾಷ್ಟ್ರಮಟ್ಟದ ಸಿಇಇ ಯಲ್ಲಿ 8ನೇ ರ್ಯಾಂಕ್ ಹಾಗೂ ರಾಜ್ಯದಲ್ಲಿ 2 ರ್ಯಾಂಕ್

Suddi Udaya

ಜು.6 : ಬೆಳ್ತಂಗಡಿ ರೋಟರಿ ಕ್ಲಬ್ ನ ನೂತನ ಪದಾಧಿಕಾರಿಗಳ ಪದಗ್ರಹಣ

Suddi Udaya

ನ.13: ದೀಪಾವಳಿ ಹಬ್ಬದ ಪ್ರಯುಕ್ತ ಕುಸಲ್ದ ಜವನೆರ್ ಬದ್ಯಾರು – ಶಿರ್ಲಾಲು ಇದರ ವತಿಯಿಂದ 5ನೇ ವರ್ಷದ ‘ಕೆಸರ್ ಡೊಂಜಿ ಕುಸಲ್ದ ಗೊಬ್ಬು’ ಕಾರ್ಯಕ್ರಮ

Suddi Udaya

ಶ್ರೀನಾಗ ಬ್ರಹ್ಮ ಸೇವಾ ಸನ್ನಿಧಿ ಕೊಜಪ್ಪಾಡಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಯು ಶೇಪ್ ವಾಕರ್ ವಿತರಣೆ

Suddi Udaya
error: Content is protected !!