25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಸಹಕಾರದೊಂದಿಗೆ ಮುಂಗಾರು ಮತ್ತು ಹಿಂಗಾರಿನಲ್ಲಿ ತಾಲೂಕಿನಲ್ಲಿ 500 ಎಕ್ರೆಯಲ್ಲಿ ಯಾಂತ್ರಿಕೃತ ಭತ್ತದ ನಾಟಿ

ಒಂದು ಕಾಲದಲ್ಲಿ ಭತ್ತ ಕೃಷಿಯನ್ನು ಹೊರತುಪಡಿಸಿ ಯಾವುದೇ ಕೃಷಿಯನ್ನು ಮಾಡದೆ, ಪ್ರತಿಯೊಬ್ಬ ರೈತನು ಕೂಡ ಭತ್ತ ಕೃಷಿಯನ್ನು ಮಾಡಿ ತನ್ನ ಜೀವನವನ್ನು ನಡೆಸುತ್ತಿದ್ದು ಇಂದು ಹೆಚ್ಚಿನ ರೈತರು ವಾಣಿಜ್ಯ ಕೃಷಿ ಅಡಿಕೆ, ರಬ್ಬರ್ ಇನ್ನಿತರ ಏಕಮುಖ ಬೆಲೆಯನ್ನು ಮಾಡುತ್ತಿದ್ದು ವರ್ಷದಿಂದ ವರ್ಷಕ್ಕೆ ಭತ್ತ ಕೃಷಿಕರ ಸಂಖ್ಯೆ ಕಡಿಮೆಯಾಗಿ ಭತ್ತದ ಗದ್ದೆಯು ಕೂಡ ಇಂದು ಅಡಿಕೆ ತೋಟವಾಗಿ ಪರಿವರ್ತನೆಗೊಳ್ಳುತ್ತಿದ್ದು, ಇದನ್ನು ಅರಿತುಕೊಂಡ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರು, ಭತ್ತ ಕೃಷಿಯನ್ನು ಉಳಿಸಬೇಕು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎನ್ನುವ ಭಾವನೆಯೊಂದಿಗೆ ಕೂಲಿ ಆಳುಗಳ ಸಮಸ್ಯೆಯಿಂದ ಭತ್ತ ಕೃಷಿಯರು ಭತ್ತ ಕೃಷಿ ಮಾಡುವುದನ್ನು ಕಡಿಮೆ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಯಾಂತ್ರಿಕೃತ ಭತ್ತ ಬೇಸಾಯವನ್ನು ಮಾಡಿದಾಗ ಹೆಚ್ಚಿನ ರೈತರು ಬೀಜದಿಂದ ಬೀಜದವರೆಗೆ ಯಂತ್ರದ ಮೂಲಕವಾಗಿ ನಾಟಿಯನ್ನು ಮಾಡಿ, ಭತ್ತ ಕೃಷಿಯನ್ನು ಉಳಿಸಲು ಸಾಧ್ಯವಿದೆ ಎನ್ನುವ ಚಿಂತನೆಯೊಂದಿಗೆ, ಸರಕಾರದ ಸಹಯೋಗದೊಂದಿಗೆ ಕೃಷಿ ಯಂತ್ರಧಾರೆಯನ್ನು ಪ್ರಾರಂಭಿಸಿದ್ದು ಸುಮಾರು 10 ವರ್ಷಗಳಿಂದ ನಿರಂತರವಾಗಿ ಭತ್ತ ಬೇಸಾಯಕ್ಕೆ ಪ್ರೋತ್ಸಾಹವನ್ನು ನೀಡಿದ್ದು, ಇದರಿಂದ ಕೂಲಿ ಆಳುಗಳ ಸಮಸ್ಯೆಯೇ ಇಲ್ಲದೆ ನಿಗದಿತ ಸಮಯದಲ್ಲಿ ನಾಟಿಯನ್ನು ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯವನ್ನು ಇಂದು ಭತ್ತ ಕೃಷಿಕರು ಈ ಯಂತ್ರಶ್ರೀ ಕಾರ್ಯಕ್ರಮದಿಂದ ಪಡೆಯುತ್ತಿದ್ದು,ಇಂದು ಯಂತ್ರಶ್ರೀ ಯೋಜನೆಯ ಮೂಲಕವಾಗಿ ತಾಲೂಕಿನಲ್ಲಿ 500 ಎಕ್ರೆ ಪ್ರದೇಶಗಳಲ್ಲಿ ಮುಂಗಾರಿಗೆ ಯಂತ್ರಶ್ರೀ ಅಂದರೆ ಯಂತ್ರದ ಮೂಲಕ ಭತ್ತನಾಟಿ ಮಾಡಲು ಇದೀಗಾಗಲೇ ರೈತರು ತಯಾರಿಯನ್ನು ಮಾಡಿಕೊಂಡಿದ್ದಾರೆ.

ಯಾಂತ್ರಿಕೃತ ಭತ್ತ ಬೇಸಾಯ ಮಾಡುವ ರೈತರಿಗೆ ಮನೆ ಬಾಗಿಲಿಗೆ ಭೇಟಿ ನೀಡಿ ಸಂಪೂರ್ಣವಾದ ಪ್ರಾತ್ಯಕ್ಷಿತ ಮಾಹಿತಿ, ಯಂತ್ರದ ಮೂಲಕ ಭತ್ತ ಬೇಸಾಯ ಮಾಡುವುದಾದರೆ ತಾಲೂಕಿನಲ್ಲಿ ಒಬ್ಬರು ಯೋಜನೆಯ ವತಿಯಿಂದ ಕೃಷಿ ಮೇಲ್ವಿಚಾರಕರಿದ್ದು ಇವರು ಯಂತ್ರಶ್ರೀ ಮಾಡುವ ರೈತರ ಮನೆಯ ಭೇಟಿಯನ್ನು ಮಾಡಿ ಬೀಜದ ಆಯ್ಕೆ, ಭತ್ತದ ಬೀಜೊಪಚಾರ,ಸಸಿ ಮಡಿ ತಯಾರಿ,ಯಂತ್ರದ ಮೂಲಕ ನಾಟಿ,ಗೊಬ್ಬರ ನೀಡುವಿಕೆ, ಮತ್ತು ರೋಗ,ಕೀಟಗಳ ಹಾಗೂ ಹುಳದಬಾದೆ ನಿಯಂತ್ರಣದ ಬಗ್ಗೆ ಸಕಾಲದಲ್ಲಿ ರೈತರ ಮನೆ ಬಾಗಿಲಿಗೆ ಭೇಟಿ ನೀಡಿ ಮಾಹಿತಿಯನ್ನು ಉಚಿತವಾಗಿ ನೀಡುತ್ತಾರೆ ಎಂದು ಯೋಜನಾಧಿಕಾರಿ ಸುರೇಂದ್ರ ತಿಳಿಸಿದರು.

ಟ್ರ್ಯಾಕ್ಟರ್ ನ ಮೂಲಕ ಉಳುಮೆ ಮತ್ತು ನಾಟಿ ಯಂತ್ರದ ಮೂಲಕವಾಗಿ ನಾಟಿ ಮಾಡಿದಾಗ ರೈತರಿಗೆ GST ಬಿಲ್.
ರೈತರು ಬೆಳೆಯಲ್ಲಿ ಯಾವುದೇ ನಷ್ಟವನ್ನು ಅನುಭವಿಸಿದಾಗ ರೈತ ತಾನು ಭತ್ತ ಕೃಷಿಯನ್ನು ಮಾಡಿದ ಆಧಾರಕ್ಕಾಗಿ ಆ ವರ್ಷದ ದಿನಾಂಕ ನಮೂದನೆಯಾಗಿ ಇಲಾಖೆಯಿಂದ ಭತ್ತದಬೀಜ ತಂದಾಗ ಇಲಾಖೆಯ ಬಿಲ್,ಕೃಷಿ ಯಂತ್ರಧಾರೆಯ ಮೂಲಕವಾಗಿ ಉಳುಮೆ ಮಾಡಿದಾಗ ಹಾಗೂ ನಾಟಿ ಮಾಡಿದಾಗ ರೈತರಿಗೆ ಕೃಷಿ ಯಂತ್ರಧಾರೆಯ ಮೂಲಕವಾಗಿ ಜಿಎಸ್‌ಟಿ ನಮೂದನೆಯಾಗಿರುವ ಟ್ಯಾಕ್ಸ್ ಇನ್ವಾಯ್ಸ್ ರೈತನ ಹೆಸರನ್ನು ನಮೂದಿಸಿ ನೀಡಲಾಗುವುದು,ಇದು ಬೆಳೆ ವಿಮೆ ಪಡೆಯುವ ಸಂದರ್ಭದಲ್ಲಿ ರೈತರಿಗೆ ಆಧಾರವಾಗುತ್ತದೆ(ಟ್ಯಾಕ್ಟರ್ ಮತ್ತು ನಾಟಿಯಂತ್ರದ ಬುಕ್ಕಿಂಗ್ ಮಾಡಲು ಕೃಷಿ ಯಂತ್ರಧಾರೆಯ ಪ್ರಬಂಧಕರಾದ ಸಚಿನ್ ರವರನ್ನು ಸಂಪರ್ಕಿಸಬಹುದು 9986623723))

ಇಂದು ಬೆಳ್ತಂಗಡಿಯಲ್ಲಿ ಮುಂಗಾರು ಮತ್ತು ಹಿಂಗಾರಿನಾ 500ಎಕ್ರೆ ಯಂತ್ರಶ್ರೀ ನಾಟಿಗೆ ತಾಲೂಕಿನ ಯೋಜನಾಧಿಕಾರಿಗಳಾದ ಸುರೇಂದ್ರ ರವರು ಚಾಲನೆಯನ್ನು ನೀಡಿದ್ದು, ಹಡಿಲು ಭೂಮಿಯಲ್ಲಿ ಭತ್ತ ಕೃಷಿಯನ್ನು ಮಾಡುತ್ತಿರುವ ಡಾ| ಹರ್ಷ,
ಈ ಸಂದರ್ಭ ಮನೆಯ ಯಜಮಾನರಾದ ಫ್ರಾನ್ಸಿಸ್ ಮಿರಂದ, CHSC ಮ್ಯಾನೇಜರ್ ಸಚಿನ್, ನಾಟಿ ಡ್ರೈವರ್ ಜಗದೀಶ್, ಮೇಲ್ವಿಚಾರಕ ಸುಶಾಂತ್, ಕೃಷಿ ಅಧಿಕಾರಿ ರಾಮ್ ಕುಮಾರ್, ಹಾಗೂ ಭತ್ತ ಕೃಷಿಕರು ಉಪಸ್ಥಿತರಿದ್ದರು.

Related posts

ಉಜಿರೆ: ರತ್ನಮಾನಸದಲ್ಲಿ ಮಾತೃ, ಪಿತೃ ,ಪೋಷಕರ ಸಭೆ ಹಾಗೂ ಗುರು ವಂದನ ಕಾರ್ಯಕ್ರಮ

Suddi Udaya

ಮಚ್ಚಿನ: ರಸ್ತೆಯಲ್ಲಿ ಹರಿದ ಮಳೆ ನೀರು; ಗ್ರಾ.ಪಂ.ನಿಂದ ಚರಂಡಿ ದುರಸ್ತಿ: ಸುದ್ದಿ ಉದಯ ಜನಧ್ವನಿ ಇಫೇಕ್ಟ್ .

Suddi Udaya

ಗೇರುಕಟ್ಟೆ ಪರಪ್ಪು ಎಸ್.ಎಸ್.ಎಫ್ ಯೂನಿಟ್ ನ ಸದಸ್ಯರು ಸಾಹಿತ್ಯೋತ್ಸವದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಸುಲ್ಕೇರಿ ಚೈತನ್ಯ ಸಂಜೀವಿನಿ ಮಹಿಳಾ ಒಕ್ಕೂಟ ಹಾಗೂ ಗ್ರಾ.ಪಂ. ಆಶ್ರಯದಲ್ಲಿ ಆಟಿಡೊಂಜಿ ದಿನ

Suddi Udaya

ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ: ಧ್ವಜಾರೋಹಣ, ಹಸಿರು ಹೊರೆಕಾಣಿಕೆ ಸಮರ್ಪಣೆ

Suddi Udaya

ಓಡಿಲ್ನಾಳ: ಮೈರಲ್ಕೆ ಪಶುಪತಿ ಕೃಪಾ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಮಾಜಿ ಶಾಸಕ ಕೆ ವಸಂತ ಬಂಗೇರರ ಪ್ರಾಯೋಜಕತ್ವದಲ್ಲಿ “ಕುಮಾರ ವಿಜಯ” ಯಕ್ಷಗಾನ ಹಾಗೂ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಸೇವೆಸಲ್ಲಿಸಿದ ಕರಸೇವಕರಿಗೆ ಗೌರವಾರ್ಪಣೆ

Suddi Udaya
error: Content is protected !!