23.7 C
ಪುತ್ತೂರು, ಬೆಳ್ತಂಗಡಿ
April 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಾರಾವಿ: ಮುಂಗಾರು ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಸಸಿ ಮಡಿ ತಯಾರಿ ಬಗ್ಗೆ ಮಾಹಿತಿ ಕಾರ್ಯಕ್ರಮ

ಬೆಳ್ತಂಗಡಿ : ಗುರುವಾಯನಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಾರಾವಿ ಮುಂಗಾರು ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಸಸಿ ಮಡಿ ತಯಾರಿ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ನಾನಾ ಕಾರಣಗಳಿಂದ ಭತ್ತ ಬೆಳೆಯುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಆತಂಕದ ನಡುವೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಯಂತ್ರ ಶ್ರೀ ಯೋಜನೆ ಮೂಲಕ ರೈತರ ಉತ್ತೇಜನ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಶ್ರೀ ಕ್ಷೇ ಧ ಗ್ರಾ ಯೋ ಗುರುವಾಯನಕೆರೆ ಯೋಜನಾಧಿಕಾರಿ ದಯಾನಂದ ಪೂಜಾರಿ ತಿಳಿಸಿದ್ದಾರೆ.

ಪ್ರಶಾಂತ್ ರವರ ಕೇಂದ್ರೀಕ್ರತ ನರ್ಸರಿಯಲ್ಲಿ ರೈತರಿಗೆ ಕಡಿಮೆ ದರದಲ್ಲಿ ರೈತರಿಗೆ ಅನುಕೂಲವಾಗುವ ಸಸಿ ಮಡಿ ತಯಾರಿಸಿ ನೀಡುತ್ತಿದ್ದಾರೆ. ಪ್ರಥಮದಲ್ಲಿ ಬಿತ್ತನೆಗೆ ಯೋಗ್ಯವಾದ ಭತ್ತದ ಬೀಜದ ಆಯ್ಕೆ ಮಾಡುವುದು ಬೀಜೋಪಚಾರ ಮಾಡಿದ ಭತ್ತದ ಬೀಜ ಒಂದು ಎಕ್ರೆಗೆ 12 ರಿಂದ 15 ಕೆಜಿ ಬೀಜ ಬೇಕಾಗುತ್ತದೆ ಅದನ್ನು ಮುಂಚಿತವಾಗಿ ನೆನೆ ಹಾಕಿ ಇಡಬೇಕು ಬಳಿಕ ಮೇಲೆತ್ತಿ ಮೊಳಕೆ ಬರಿಸಲು ಇಡಬೇಕು ಮುಂಚಿತವಾಗಿ ಮಣ್ಣನ್ನು ಜರಡಿ ಹಿಡಿದು ಸಂಗ್ರಹಿಸಿ ಇಡಬೇಕು ಒಂದು ಎಕ್ರೆ ಪ್ರದೇಶಕ್ಕೆ 70 ರಿಂದ 80 ಟ್ರೇ ಗಳು ಬೇಕಾಗಿದ್ದು ಟ್ರೇ ಗಳಿಗೆ ಸರಿಯಾಗಿ ಜರಡಿ ಹಿಡಿದ ಮಣ್ಣನ್ನು ಸರಿಯಾಗಿ ತುಂಬಬೇಕು ಮೊಳಕೆ ಬರಿಸಿದ ಭತ್ತದ ಬೀಜವನ್ನು ಸರಿಯಾಗಿ ಟ್ರೇ ಬಿತ್ತಿ ಹೊದಿಕೆ ಮಾಡಬೇಕು ಮೂರು ದಿನ ನಂತರ ಹೊದಿಕೆಯನ್ನು ತೆಗೆದು ದಿನಕ್ಕೆ ಎರಡು ಅಥವಾ ಮೂರು ಬಾರಿ ಮಿತವಾಗಿ ನೀರನ್ನು ಹಿಡಿಯಬೇಕು 15ರಿಂದ 18 ದಿನದೊಳಗೆ ನಾಟಿಗೆ ಯೋಗ್ಯವಾದ ಸಸಿ ಮಡಿ ತಯಾರಾಗುತ್ತದೆ ಎಂದು ಕೃಷಿ ಮೇಲ್ವಿಚಾರಕರು ಕೃಷ್ಣ ಗೌಡ ಮಾಹಿತಿ ನೀಡಿದರು


ಈ ಸಂದರ್ಭದಲ್ಲಿ ಪ್ರಶಾಂತ್ ಚಿತ್ತಾರ, ಅಣ್ಣಿ ಪೂಜಾರಿ, ಕೇಶವ ಪೂಜಾರಿ, ನೀಲಯ್ಯ, ಕಮಲಾಕ್ಷಿ , ಸುಶೀಲ, ಈರಮ್ಮ, ಯಶೋಧ, ಸುಮಿತ್ರಾ, ವಶಾಂತಿ, ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

Related posts

ಬಳ್ಳಮಂಜ: ಶ್ರೀ ಸಿದ್ದಿವಿನಾಯಕ ಭಜನಾ ಮಂದಿರ ದಲ್ಲಿ ಸಾರ್ವಜನಿಕ ತೆನೆ ಹಬ್ಬ ಹಾಗೂ ಆಯುಧ ಪೂಜೆ

Suddi Udaya

ಕಾರಂದೂರು ಮನೆತನದ ಹಿರಿಯರು, ಪಡುಪಾಲ್ಟಾಲು ದಿ. ಪದ್ಮ ಪೂಜಾರಿಯವರ ಪತ್ನಿ ಶ್ರೀಮತಿ ಲಕ್ಷ್ಮೀ ನಿಧನ

Suddi Udaya

ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಆಶ್ರಯದಲ್ಲಿ ಕೋಟಿ ಚೆನ್ನಯ ಕ್ರೀಡಾಕೂಟ ಧರ್ಮಸ್ಥಳದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಸಮಾಲೋಚನಾ ಸಭೆ

Suddi Udaya

ಅನನ್ಯ ಪೈ, ಗೇರುಕಟ್ಟೆ ಹುಟ್ಟುಹಬ್ಬ

Suddi Udaya

ಸೌತಡ್ಕ ದೇವಳದ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಬೆಳ್ತಂಗಡಿ : ಬಿಜೆಪಿ ವತಿಯಿಂದ ವಿಬಿಜಿ ರಾಮ್ ಜಿ ಯೋಜನೆಯ ಜನಜಾಗೃತಿ ಮೂಡಿಸಲು ಬೃಹತ್ ಜಾಥಾ

Suddi Udaya
error: Content is protected !!