ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ವತಿಯಿಂದ ಔಟ್ ಸೈಡ್ ವಾಕರ್ ವಿತರಣೆ

Suddi Udaya

ಧರ್ಮಸ್ಥಳ ಗ್ರಾಮದ ಮಲ್ಲರ್ ಮಾಡಿ ಮೋಹಿನಿ ಬೇಕಲ್ ರವರ ಮಗ, ಅನೂಪ್ ಕೃಷ್ಣ, ಇವರಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ, ಡಿ ವೀರೇಂದ್ರ ಹೆಗ್ಗಡೆಯವರು ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಿಶೇಷವಾಗಿ ನೀಡಿರುವ ವಾಕರ್ ಅನ್ನು ಧರ್ಮಸ್ಥಳ ವಲಯದ ಮೇಲ್ವಿಚಾರಕರಾದ ರವೀಂದ್ರ ಅನೂಪ್ ಕೃಷ್ಣ ರವರ ಮನೆಯಲ್ಲಿ ವಿತರಿಸಿದರು.

ಇತ್ತೀಚೆಗೆ ಧ್ವಿಚಕ್ರ ವಾಹನದಲ್ಲಿ ನೇತ್ರಾವತಿ ಬಳಿ ಹೋಗುತ್ತಿರುವಾಗ ಅಪಘಾತ ಸಂಭವಿಸಿ ಬಲ ಕಾಲಿಗೆ ಬಲವಾದ ಪೆಟ್ಟು ಬಿದ್ದ ಕಾರಣ ತಕ್ಕ ಮಟ್ಟಿಗೆ ಸರಿಯಾಗಿ ನಡೆಯಲು ಆಗದ ಕಾರಣ ನಡೆದಾಡಲು ವಾಕರಿನ ಅವಶ್ಯಕತೆ ಇರುವುದರಿಂದ ಅವರ ಮನೆಗೆ ಭೇಟಿ ನೀಡಿ ವಿತರಿಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಸ್ನೇಕ್ ಪ್ರಕಾಶ್, ಒಕ್ಕೂಟದ ಅಧ್ಯಕ್ಷ ಸುಲೈಮಾನ್, ಕಾರ್ಯದರ್ಶಿ ಯಮುನಾ, ಸೇವಾಪ್ರತಿನಿಧಿ ಸುಜಾತಾ, ಶೌರ್ಯ ಧರ್ಮಸ್ಥಳ ಘಟಕದ ಸ್ವಯಂಸೇವಕರಾದ ನಳಿನ್ ಕುಮಾರ್, ಶ್ರೀಧರ್ ಗೌಡ, ಮೋಹಿನಿ, ಉಪಸ್ಥಿತರಿದ್ದರು

Leave a Comment

error: Content is protected !!