September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸುಲ್ಕೇರಿ ಶ್ರೀವಿದ್ಯಾ ಸಂಸ್ಥೆಯ ಶಾಲಾ ನೂತನ ಕಟ್ಟಡ ಹಾಗೂ ನೂತನ ಶಿಶುಮಂದಿರದ ಕುಟೀರ ಉದ್ಘಾಟನೆ

ಸುಲ್ಕೇರಿ: ಶ್ರೀರಾಮ ಶಿಶುಮಂದಿರದ ನೂತನ ಕುಟೀರ ಉದ್ಘಾಟನೆ ಮತ್ತು ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀರಾಮ ಪ್ರೌಢ ಶಾಲೆ ಸುಲ್ಕೇರಿ ನೂತನ ಕಟ್ಟಡ ಉದ್ಘಾಟನೆ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.


ಎಲ್ಲಾ ಪೂಜಾ ವಿಧಿವಿಧಾನಗಳ ನಂತರ ಶಿಶುಮಂದಿರದ ನೂತನ ಕುಟೀರವನ್ನು ರಾಷ್ಟ್ರೀಯ ಸ್ವಯಸೇವಕ ಸಂಘ ಮಂಗಳೂರು ವಿಭಾಗ ಮಾನ್ಯ ಸಂಘ ಚಾಲಕರು ಡಾ. ನಾರಾಯಣ ಶೆಣೈ ಭಾರತಾಂಬೆಗೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಕಾರ್ಕಳ ಕಮಲಾಕ್ಷ ಕಾಮತ್ ಶಿಶುಮಂದಿರದ ಬಳಿ ಪ್ರತಿಷ್ಠಾಪಿಸಿದ ಸರಸ್ವತಿ ವಿಗ್ರಹವನ್ನು ಅನಾವರಣ ಮಾಡಿದರು. ಶಿಶುಮಂದಿರದ ಪುಟಾಣಿಗಳಿಗೆ ಆರತಿ ಬೆಳಗಿ ತಿಲಕ ಇಟ್ಟು ಸಿಹಿ ನೀಡಲಾಯಿತು ವಿಧ್ಯಾರ್ಥಿಗಳು ಶಿಶುಮಂದಿರದ ನೂತನ ಕುಟೀರದ ಹೊಸ್ತಿಲಿಗೆ ನಮಸ್ಕಾರ ಮಾಡಿ ಒಳಗೆ ಪ್ರವೇಶ ಮಾಡಿದರು. ನಂತರ ಎಮ್.ಆರ್.ಪಿ.ಎಲ್ ನ ಸಿಎಸ್ಆರ್ ಮೂಲಕ ನಿರ್ಮಿಸಲಾದ 4 ಕೊಠಡಿಗಳ ನೂತನ ಕಟ್ಟಡವನ್ನು ಎಮ್.ಆರ್.ಪಿ.ಎಲ್ ನ ಹಿರಿಯ ಅಧಿಕಾರಿ ಪ್ರದೀಪ್ ಉದ್ಘಾಟಿಸಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕಲ್ಲಡ್ಕ ಇವರ ಅಧ್ಯಕ್ಷತೆಯಲ್ಲಿ ಸಭಕಾರ್ಯಕ್ರಮ ನಡೆಯಿತು,

ವೇದಿಕೆಯಲ್ಲಿ ಎಮ್.ಆರ್.ಪಿ.ಎಲ್ ನ ಅಧಿಕಾರಿ ಪ್ರದೀಪ್ ಸೇರಿದಂತೆ ಪ್ರಮುಕ ದಾನಿಗಳನ್ನು ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಾರ್ಕಳ ಕಮಲಾಕ್ಷ ಕಾಮತ್, ಡಾ.ರವೀಂದ್ರ ಶೆಟ್ಟಿ ಅಧ್ಯಕ್ಷರು ರಾಜ್ಯ ಕೃಷರ್ ಮಾಲೀಕರ ಸಂಘ ಬಜಗೋಳಿ, ಶಾಲಾ ಆಡಳಿತ ಮಂಡಳಿ ಯ ಗೌರವಾಧ್ಯಕ್ಷ ಗಣೇಶ್ ಹೆಗ್ಡೆ ಹಾಗೂ ಅಧ್ಯಕ್ಷರಾದ ರಾಜು ಪೂಜಾರಿ ಉಪಸ್ಥಿತರಿದ್ದರು.

Related posts

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನ: ಶಾಸ್ತಾರ ದೇವರ ಗರ್ಭ ಗುಡಿಯ ಬ್ರಹ್ಮಕಲಶೋತ್ಸವ ಸಮಿತಿ ರಚನೆ

Suddi Udaya

ಶಿರ್ಡಿ,ಶನಿ ಶಿಂಗಣಾಪುರ, ಭೀಮಾಶಂಕರ ಕ್ಷೇತ್ರ ದರ್ಶನ: ಶ್ರೀ ಕಾಳಿದಾಸ ಬಾಬಾ ಮಹಾಸ್ವಾಮೀಜಿಯವರಿಂದ ಬೆಳ್ತಂಗಡಿ ಯಾತ್ರಾರ್ಥಿಗಳಿಗೆ ಆಶೀರ್ವಾದ

Suddi Udaya

ಯಕ್ಷಭಾರತಿ ನೇತೃತ್ವದಲ್ಲಿ ಗೋವಿಂದ ನಮನ, ನರೇಂದ್ರ ಕುಮಾರ್ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಳೆ

Suddi Udaya

ಅಳದಂಗಡಿ: ಹೊಟೇಲ್ ಉದ್ಯಮ ನಿರ್ವಹಿಸುತ್ತಿದ್ದ ಯೋಗೀಶ್ ಪೂಜಾರಿ ಹೆನ್ಕಲ ಅನಾರೋಗ್ಯದಿಂದ ನಿಧನ

Suddi Udaya

ಕುತ್ಲೂರು ಸ.ಉ. ಪ್ರಾಥಮಿಕ ಶಾಲೆಗೆ ದಾನಿಗಳಿಂದ ಟೈ, ಬೆಲ್ಟ್, ಉಳಿತಾಯ ಖಾತಾ ಪುಸ್ತಕ ವಿತರಣೆ

Suddi Udaya

ಮಾಲಾಡಿ : ಸಂಪತ್ ರಾಜ್ ಭಟ್ ನಿಧನ

Suddi Udaya
error: Content is protected !!