ಧರ್ಮಸ್ಥಳ : ಮಳೆಗೆ ತೀರ ಹದಗೆಟ್ಟ ಮುಳಿಕ್ಕಾರು ಮಣ್ಣಿನ ರಸ್ತೆ: ದುರಸ್ತಿಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಧರ್ಮಸ್ಥಳ: ಇಲ್ಲಿಯ ಮುಳಿಕ್ಕಾರು ಎಂಬಲ್ಲಿ ಮಣ್ಣಿನ ರಸ್ತೆಯು ಮಳೆಗೆ ತೀರ ಹದೆಗೆಟ್ಟಿದ್ದು ಇಲ್ಲಿಯ ಗ್ರಾಮಸ್ಥರು ಸಂಚರಿಸಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಯಾವುದೇ ರೀತಿಯ ಸಲಕರಣೆ ವಸ್ತುಗಳನ್ನು ತೆಗೆದುಕೊಂಡು ಹೋಗಲು ಜನರು ನಡೆದುಕೊಂಡೇ ಹೋಗುವ ಮಟ್ಟಿಗೆ ಈ ರಸ್ತೆ ಹದಗೆಟ್ಟಿದೆ.
ಇಲ್ಲಿ ಅನೇಕ ಮನೆಗಳಿದ್ದು ಆಟೋ, ಜೀಪು ಚಾಲಕರು ನಮ್ಮ ವಾಹನ ಅಲ್ಲಿಗೆ ಬಾಡಿಗೆಗೆ ಹೋದರೆ ಎಲ್ಲಿ ಹೂತಾಕಿಕೊಂಡು ಬಿಡುತ್ತದೆ ಎಂಬ ಭಯ ಅವರಲ್ಲಿ ಕಾಣುತ್ತಿದೆ.


ಕಳೆದ ಚುನಾವಣೆಯಲ್ಲಿ ಮತಗಟ್ಟೆಗೆ ಬರುವುದಿಲ್ಲ ಎಂದು ಕುಳಿತ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಗ್ರಾಮಸ್ಥರನ್ನು ಒಪ್ಪಿಸಿ ಈ ಬಾರಿ ಖಂಡಿತ ರಸ್ತೆ ಕಾಮಗಾರಿ ನಡೆಯುತ್ತದೆ ಎಂದು ಹೇಳಿ ಮತ ಹಾಕಿಸಿದ್ದರು.
ಇನ್ನಾದರೂ ಈ ರಸ್ತೆಯನ್ನು ದುರಸ್ತಿ ಪಡಿಸುವಂತೆ ಮುಳಿಕ್ಕಾರು ಗ್ರಾಮಸ್ಥರು ಜನಪ್ರತಿನಿಧಿಗಳಲ್ಲಿ ವಿನಂತಿಸುತ್ತಿದ್ದಾರೆ.

Leave a Comment

error: Content is protected !!