ಡೆಂಗ್ಯೂ ಜ್ವರದಿಂದ ಬಳಲಿ ವಿಶ್ರಾಂತಿಯಲ್ಲಿದ್ದ ಬದ್ಯಾರು ನಿವಾಸಿ ದಿವಾಕರ ಶೆಟ್ಟಿ ಅಸ್ವಸ್ಥಗೊಂಡು ನಿಧನ

Suddi Udaya

ಬೆಳ್ತಂಗಡಿ: ಬದ್ಯಾರು ಮಲ್ಯೋಡಿ ನಿವಾಸಿ ದಿವಾಕರ ಶೆಟ್ಟಿ (50ವ) ಡೆಂಗ್ಯೂ ಜ್ವರದಿಂದ ಬಳಲಿ ವಿಶ್ರಾಂತಿಯಲ್ಲಿದ್ದು ಅಸ್ವಸ್ಥಗೊಂಡು ನಿಧನರಾದರು.

ಬೆಳ್ತಂಗಡಿ ಗಾರ್ಡನ್ ರೆಸ್ಟೋರೆಂಟ್ ನಲ್ಲಿ ಉದ್ಯೋಗದಲ್ಲಿದ್ದು ಡೆಂಗ್ಯೂ ಜ್ವರ ಬಾಧಿಸಿದ್ದು ಕೆಲಸಕ್ಕೆ ರಜೆ ಹಾಕಿ ಡೆಂಗ್ಯೂ ಜ್ವರಕ್ಕೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮನೆಯಲ್ಲಿದ್ದ ಅವರು ಕಸ ಬಿಸಾಡಲು ಮನೆಯ ಅಂಗಳಕ್ಕೆ ಹೋದಾಗ ಬಿದ್ದರೆನ್ನಾಲಾಗಿದೆ. ತಕ್ಷಣ ಆಸ್ಪತ್ರೆಗೆ ತಂದರೂ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ.

ಮೃತರು ಪತ್ನಿ ದಿವ್ಯಾ, ಎರಡು ಗಂಡು ಮಕ್ಕಳು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Leave a Comment

error: Content is protected !!