September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ನಾರಾವಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿವಿಧ ರೋಗಗಳ ಕುರಿತು ಮಾಹಿತಿ ಕಾರ್ಯಾಗಾರ

ನಾರಾವಿ ಸರಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆಯ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಗೋಪಿ ಹಾಗೂ ಆಶಾ ಕಾರ್ಯಕರ್ತೆಯರಿಂದ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯ ಮೊದಲಾದ ರೋಗಗಳ ಬಗ್ಗೆ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ನೀರು ನಿಲ್ಲುವಂತಹ ಸ್ಥಳ, ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕಾದ ರೀತಿ, ವಿವಿಧ ರೋಗಗಳಾದ ಮಲೇರಿಯ, ಡೆಂಗ್ಯೂ ರೋಗ ಬರುವ ಸೊಳ್ಳೆಗಳಾದ ಅನಾಫಿಲೀಸ್, ಈಡಿಸ್ ಬಗ್ಗೆ ಹೇಳುತ್ತ ರೋಗ ಲಕ್ಷಣಗಳ ಕುರಿತು ವಿವರಿಸಿದರು, ಜ್ವರ ಬಂದಾಗ ರಕ್ತ ಪರೀಕ್ಷೆ ಮಾಡಿಯೇ ಔಷಧ ತೆಗೆದು ಕೊಳ್ಳಲು ತಿಳಿಸಿದರು. ಡೆಂಗ್ಯೂ ವಿನಂತಹ ಮಾರಣಾಂತಿಕ ಕಾಯಿಲೆಗೆ ನಿರ್ಧಿಷ್ಟವಾದ ಔಷಧವೂ ಇಲ್ಲದ ಕಾರಣ ಬರದಂತೆ ತಡೆಯುವುದು ಅತೀ ಮುಖ್ಯ ಎಂದರು.

ಅತೀ ಹೆಚ್ಚು ನೀರು ಕುಡಿಯುವುದು, ವ್ಯಾಯಮದಂತಹ ಹವ್ಯಾಸಗಳು ಕೂಡಾ ಆರೋಗ್ಯವನ್ನು ಕಾಪಾಡುತ್ತದೆ. ಎಂಬ ಮಾಹಿತಿಗಳು ವಿದ್ಯಾರ್ಥಿಗಳಲ್ಲಿ ಆರೋಗ್ಯದ ಕುರಿತು ಜಾಗೃತಿಯನ್ನು ಮೂಡಿಸಿತು. ಬಳಿಕ ಪೈಲೇರಿಯ -ಕ್ಯೂಲೆಸ್ ಜಾತಿಯ ಸೊಳ್ಳೆಯು ಅಶುದ್ಧ ನೀರಿನಲ್ಲಿ ಮೊಟ್ಟೆ ಇಟ್ಟು ಬರುವ ಆನೆ ಕಾಲು ರೋಗದ ಬಗ್ಗೆ ತಿಳಿಸಿದರು. ಅದೇ ರೀತಿ ಫಾಗಿಂಗ್ ಬಗ್ಗೆಯು ಮಾಹಿತಿ ತಿಳಿಸಿದರು. ತದ ನಂತರ ಆಶಾ ಕಾರ್ಯಕರ್ತರಾದ ಯಮುನ ಇವರು ಒರಳು ಕಲ್ಲು, ಅಡಿಕೆ ಹಾಳೆ ಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕಾದ ಕ್ರಮ ದ ಬಗ್ಗೆ ಹೇಳುತ್ತ ಟೈಫಾಯಿಡ್ ರೋಗ ಬರುವ ರೀತಿ ಹೇಳುತ್ತಾ ಕುದಿಸಿ ಆರಿಸಿದ ನೀರನ್ನು ಕುಡಿಯುವಂತೆ ಮಾಹಿತಿ ನೀಡಿದರು. ಮುಖ್ಯ ಗುರುಗಳಾದ ಪ್ರಭಾಕರ್ ರವರು ಸ್ವಾಗತಿಸಿ ಧನ್ಯವಾದಗೈದರು.

Related posts

ವಾಲಿಬಾಲ್ ಪಂದ್ಯಾಟದಲ್ಲಿ ಬೆಳ್ಳಿ ಪದಕ ಗೆದ್ದ ಮುಂಡಾಜೆ ವಿವೇಕಾನಂದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಭವ್ಯ ಸ್ವಾಗತ

Suddi Udaya

ಸೌಜನ್ಯ ಸಾವು ಪ್ರಕರಣ: ಸರಕಾರ ಹಾಗೂ ತನಿಖಾ ಸಂಸ್ಥೆ ಸೂಕ್ತ ನ್ಯಾಯ ಒದಗಿಸಲಿ: ಡಾ. ಹೆಗ್ಗಡೆ

Suddi Udaya

ಗುರಿಪಳ್ಳ ಒಕ್ಕೂಟದ ಆಶ್ರಯದಲ್ಲಿ ಸಂಭ್ರಮದ ‘ಆಟಿದ ಕಮ್ಮೆನ’ ಕಾರ್ಯಕ್ರಮ

Suddi Udaya

ಕಾಶ್ಮೀರದ ಪಹಲ್ಗಾಮ್ ನಲ್ಲಿ ಹಿಂದೂ ಪ್ರವಾಸಿಗರ ಭಯೋತ್ಪಾದಕರ ದಾಳಿ ಖಂಡಿಸಿ ಮಲವಂತಿಗೆ – ಮಿತ್ತಬಾಗಿಲು ಗ್ರಾಮಸ್ಥರ ಪ್ರತಿಭಟನೆ ಹಾಗೂ ಶ್ರದ್ಧಾಂಜಲಿ ಸಭೆ

Suddi Udaya

ಬೆಳ್ತಂಗಡಿ ಎಸ್‌.ಡಿ.ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ತರಬೇತಿ ಶಿಬಿರದ ಉದ್ಘಾಟನೆ

Suddi Udaya

ಮಾಲಾಡಿ ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾದ ರೂ 1.0 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಾಲಾಡಿ ಗ್ರಾಮದ ಪೆರ್ಡೆ ಕ್ರಾಸ್ ನಿಂದ ಊರ್ಲ ಕಾಂಕ್ರೀಟೀಕರಣ ರಸ್ತೆ ಕಾಮಗಾರಿ ಉದ್ಘಾಟನೆ

Suddi Udaya
error: Content is protected !!