30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಪ್ರಮುಖ ಸುದ್ದಿ

ಗೇರುಕಟ್ಟೆ ನಿವೃತ್ತ ಯೋಧ ವಿಕ್ರಮಗೆ ಅದ್ದೂರಿ ಸ್ವಾಗತ

ಬೆಳ್ತಂಗಡಿ : ಜೂ.17. ಗೇರುಕಟ್ಟೆ ನ್ಯಾಯತರ್ಪು ಗ್ರಾಮದ ವಂಜಾರೆ ನಿವಾಸಿ ವಿಕ್ರಮ್ ಜೆ.ಎನ್.19 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿ ಜು.3 ರಂದು ನಿವೃತ್ತ ಯೋಧ ವಿಕ್ರಂ ಜೆ.ಎನ್. ರಾಜಸ್ಥಾನದಿಂದ ಹುಟ್ಟೂರಿಗೆ ಆಗಮಿಸುವ ಪ್ರಯುಕ್ತ ಅದ್ದೂರಿ ಸ್ವಾಗತ,ಅಭಿನಂದನಾ ಸಮಿತಿ ರಚನೆ ಹಾಗೂ ಸಮಾಲೋಚನೆ ಸಭೆ ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ವಠಾರದಲ್ಲಿ ಜೂ.17 ರಂದು ಸಂಜೆ ಜರುಗಿತು.
ಸಮಿತಿ ಅಧ್ಯಕ್ಷರಾಗಿ ವಸಂತ ಮಜಲು,ಸಂಚಾಕಲರಾಗಿ ಸುರೇಶ್ ಕುಮಾರ್ ಆರ್.ಎನ್,ಜನಾರ್ದನ ಗೌಡ ಕೆ,ವಿಠ್ಠಲ ಶೆಟ್ಟಿ ಯು, ಪ್ರಕಾಶ್ ಪೂಜಾರಿ ಪಿ,ಕೆ.ಎನ್ ಗೌಡ,ಯಾದವ ಗೌಡ ಎಮ್,ಉಮೇಶ ಕೆ, ಭುವನೇಶ್ ಜಿ, ವಿಜಯ ಕುಮಾರ್ ಕೆ,ವಸಂತ ಕುಮಾರ್,ನೇವಿಲ್ ಸ್ಟೀವನ್ ಮೊರಾಸ್,ರಂಜನ್ ಹೆಚ್,ತುಕರಾಮ
ಪೂಜಾರಿ, ಅಬ್ದುಲ್ ಕರೀಂ ಕೆ.ಎಮ್,ಕೋಶಾಧಿಕಾರಿ ನಿವೃತ್ತ ಸೈನಿಕ ದಿನೇಶ ಗೌಡ ಕೆ, ಅವರನ್ನು ಆಯ್ಕೆ ಮಾಡಿದರು.
2005 ರಂದು ಮಹಾರಾಷ್ಟ್ರದ ಪೂಣೆ ಯಲ್ಲಿರುವ ಸೈನಿಕ ತರಬೇತಿಗೆ ಆಯ್ಕೆಯಾಗಿ ಸುಮಾರು 19 ವರ್ಷಗಳ ಕಾಲಸೇವೆ ಸಲ್ಲಿಸಿ ಜು.3 ರಂದು ರಾಜಸ್ಥಾನದಿಂದ ಮಂಗಳೂರಿಗೆ ಆಗಮಿಸಿ,ವಾಹನ ಜಾಥದೊಂದಿಗೆ ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಬೆಳ್ತಂಗಡಿ ಬಸ್ ನಿಲ್ದಾಣದ ಮೂಲಕ ಗುರುವಾಯನಕೆರೆಯಿಂದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಹುಟ್ಟೂರಿಗೆ ಆಗಮಿಸಿ,ಗೇರುಕಟ್ಟೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದನಾ ಸಭೆ ನಡೆಯಲಿದೆ.
ಈ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ವಿಜೃಂಭಣೆಯಿಂದ ಸ್ವಾಗತಿಸುವ ಬಗ್ಗೆ ಸಭೆಯಲ್ಲಿ ತೀರ್ಮಾಸಿದರು. ಹಾಗೂ ನಿವೃತ್ತ ಯೋಧರ ಹುಟ್ಟೂರಿಗೆ ಸ್ವಾಗತ ಮತ್ತು ಅಭಿನಂದನಾ ಸಭೆಯ ಯಶಸ್ವಿಗೆ ಗ್ರಾಮಸ್ಥರು,ಸಂಘ ಸಂಸ್ಥೆಗಳು ಸಹಕರಿಸ ಬೇಕು ಎಂದು ಸಮಿತಿ ಅಧ್ಯಕ್ಷ ವಸಂತ ಮಜಲು ಸಭೆಯಲ್ಲಿ ತಿಳಿಸಿದರು.
ಕಳಿಯ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್, ಉಪಾಧ್ಯಕ್ಷೆ ಇಂದಿರಾ ಬಿ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ., ನಿವೃತ್ತ ಸೈನಿಕ ಐ.ಎಮ್.ಸುಬ್ರಮಣಿ, ನಿವೃತ್ತ ಅಂಚೆ ಅಧಿಕಾರಿ ಕೂಸಪ್ಪ ಗೌಡ, ನಿವೃತ್ತಿಯ ಸೈನಿಕರ ತಂದೆ ಜನಾರ್ದನ ಪೂಜಾರಿ, ತಾಯಿ ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಕೆ.ಎಸ್,ಪತ್ನಿ ಪ್ರಮೀಳಾ ವಿಕ್ರಮ್ ಮತ್ತು ಮಕ್ಕಳು,ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು,ಸದಸ್ಯರು, ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಕಳಿಯ ಸಿ.ಎ.ಬ್ಯಾಂಕ್ ನಿರ್ದೇಶಕರು,ಧಾರ್ಮಿಕ, ಶೈಕ್ಷಣಿಕ ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಮೇಶ್ ಕೇಲ್ದಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಸಂತ ಕುಮಾರ್ ಧನ್ಯವಾವಿತ್ತರು.

Related posts

ಇಂದಬೆಟ್ಟು: ಕರುವಲ್ಲ ಕಲ್ಲಗುಂಡ ದೇವಸ್ಥಾನ ಹಾಗೂ ಬಂಗಾಡಿ ಹಾಡಿ ದೈವಗಳ ಕಾಣಿಕೆ ಡಬ್ಬಿ ಕಳ್ಳತನ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಬಹುಮಾನ

Suddi Udaya

ನಾವೂರು ಗ್ರಾ.ಪಂ. ನಲ್ಲಿ ಆರೋಗ್ಯ ಕಾರ್ಯಪಡೆಯ ಸದಸ್ಯರಿಗೆ ತರಬೇತಿ ಕಾರ್ಯಕ್ರಮ ಮತ್ತು ಸ್ಚಚ್ಚತಾ ಹೀ ಸೇವಾ ಆಂದೋಲನ ಕಾರ್ಯಕ್ರಮ

Suddi Udaya

ದ.ಕ ಜಿಲ್ಲೆಯಲ್ಲಿ ಕಾಡಿದ ಕುಡಿಯುವ ನೀರಿನ ಸಮಸ್ಯೆ ಜಿಲ್ಲಾಡಳಿತ ಕೂಡಲೇ ಶಾಸಕರುಗಳ ಸಭೆ ಕರೆಯುವಂತೆ ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಣಾಧಿಕಾರಿ ಎಂ.ವೈ. ಹರೀಶ್ ಕುಮಾರ್ ಹೃದಯಾಘಾತದಿಂದ ನಿಧನ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

Suddi Udaya
error: Content is protected !!