ಸುದ್ದಿ ಉದಯ ಪತ್ರಿಕೆಯ ಫಲಶ್ರುತಿ; ಗೇರುಕಟ್ಟೆ ಜನತಾ ಕಾಲೋನಿಯಲ್ಲಿ ಮನೆಯಲ್ಲಿಯೇ ಇದ್ದ ಬಾಲಕಿ ಮರಳಿ ಶಾಲೆಗೆ

Suddi Udaya

ಬೆಳ್ತಂಗಡಿ: ಗೇರುಕಟ್ಟೆ ಜನತಾ ಕಾಲೋನಿಯಲ್ಲಿ ಶಾಲೆಗೆ ಹೋಗದೆ ಮನೆಯಲ್ಲಿಯೇ ಇದ್ದ ಬಾಲಕಿಯನ್ನು ಸೇರಿಸಲಾಯಿತು. ‘ಸುದ್ದಿ ಉದಯ ವಾರ ಪತ್ರಿಕೆ’ಯಲ್ಲಿ ಜನತಾ ಕಾಲೋನಿಯಲ್ಲಿ ಶಾಲೆಗೆ ಹೋಗದ ಬಾಲಕಿಯ ಬಗ್ಗೆ ವರದಿ ಪ್ರಕಟಿಸಲಾಗಿತ್ತು. ಇದೀಗ ಪಂಚಾಯತ್ ಸದಸ್ಯರಾದ ಮರೀಟಾ ಪಿಂಟೊ, ಶ್ವೇತಾ ಶ್ರೀನಿವಾಸ್, ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಕಾರ್ಯದರ್ಶಿ ಕುಂಞ ಕೆ,ಸಿಬ್ಬಂದಿ ರವಿ ಹೆಚ್. ಮನೆಗೆ ಭೇಟಿ ಮಾಡಿ ಮನೆಯವರ ಮನವೊಲಿಸಿ ಶಾಲೆಗೆ ಸೇರಿಸಲು ಯಶಸ್ವಿಯಾಗಿದ್ದಾರೆ.

ಬಾಲಕಿಗೆ ಹೊದಿಕೆ ಬಟ್ಟೆಗಳನ್ನು ನಿತ್ಯ ಬಳಕೆಗೆ ಉಪಯೋಗಿಸುವ ಕೆಲವೊಂದು ವಸ್ತುಗಳನ್ನು ಪಂಚಾಯತ್ ವತಿಯಿಂದ ನೀಡಿ ವಿದ್ಯಾಭ್ಯಾಸಕ್ಕೆ ಸಹಕರಿಸಿದರು.

ವರದಿ: ಕೆ.ಎನ್ ಗೌಡ

Leave a Comment

error: Content is protected !!