ಬೆಳ್ತಂಗಡಿ ಮಹಿಳಾ ಜೆಸಿ ವಿಭಾಗದಿಂದ ಧ್ವನಿವರ್ಧಕ ಕೊಡುಗೆ

Suddi Udaya

ಬಳಂಜದಲ್ಲಿ ನಾಲ್ಕೂರು ಗ್ರಾಮದ ರಾಮನಗರ ಅಂಗನವಾಡಿ ಕೇಂದ್ರದಲ್ಲಿ ಚಿಣ್ಣರ ಡ್ಯಾನ್ಸ್ ಹಾಗೂ ಇತರ ಚಟುವಟಿಕೆಗಳಿಗೆ ಬೇಕಾದ ಧ್ವನಿವರ್ಧಕವನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀ ಯ ಮಹಿಳಾ ಜೆಸಿ ವಿಭಾಗದಿಂದ ಕೊಡುಗೆಯಾಗಿ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ಜೆಸಿಐ ಯ ಅಧ್ಯಕ್ಷರಾದ ರಂಜಿತ್ ಎಚ್ ಡಿ, ಮಹಿಳಾ ವಿಭಾಗದ ಶ್ರುತಿ ರಂಜಿತ್, ಅಂಗನವಾಡಿ ಟೀಚರ್ ಗೀತಾ, ಸಹಾಯಕಿ ನಳಿನಿ, ಆಯಾನ್ಸ್ ಸುಧಾಮ ಹಾಗೂ ಮಕ್ಕಳು ಉಪಸ್ಥಿತರಿದ್ದರು.ಸುಮಾರು ಹದಿನೈದಕ್ಕೂ ಹೆಚ್ಚಿನ ಮಕ್ಕಳು ಈ ಅಂಗನವಾಡಿ ಕೇಂದ್ರದಲ್ಲಿ ಇದ್ದಾರೆ.

Leave a Comment

error: Content is protected !!