23.5 C
ಪುತ್ತೂರು, ಬೆಳ್ತಂಗಡಿ
June 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ ಆಟೋ ಚಾಲಕರ ಸಂಘದ ವತಿಯಿಂದ ಶಿವರಾಮ ಪೂಜಾರಿ ರವರಿಗೆ ಧನಸಹಾಯ

ಬೆಳ್ತಂಗಡಿ : ಕಳಿಯ ಗ್ರಾಮದ ಬೆಳ್ತಂಗಡಿ ಹೂವಿನ ವ್ಯಾಪಾರಿ ಮೇರ್ಲ ಶಿವರಾಮ ಪೂಜಾರಿ ಇತ್ತೀಚಿಗೆ ಅಪಘಾತದಲ್ಲಿ ಗಾಯಗೊಂಡ ಅವರ ಆರೋಗ್ಯ ಚಿಕಿತ್ಸೆಗಾಗಿ ಗೇರುಕಟ್ಟೆ ಸ್ನೇಹ ಸಂಗಮ ಅಟೋ ಚಾಲಕ-ಮಾಲಕರ ಸಂಘದ ವತಿಯಿಂದ ಮನೆಗೆ ಭೇಟಿ ನೀಡಿ ನಗದು ಧನ ಸಹಾಯ ನೀಡಿದರು ಹಾಗೂ ಬೇಗನೆ ಗುಣಮುಖರಾಗಿ ಎಂದು ಸಂಘದ ಸದಸ್ಯರು ಹಾರೈಸಿ ಮಾನವೀಯತೆ ಮೆರೆದರು.


ಮೇ.5 ರಂದು ರಾತ್ರಿ ಮನೆಗೆ ಬರುವಾಗ ಗುರುವಾಯನಕೆರೆ ವಾಹನ ಅಪಘಾತದಲ್ಲಿ ಗಂಭೀರವಾದ ಗಾಯಗೊಂಡರು.
ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಆಗಿದೆ. ಈಗಾಗಲೇ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಗೇರುಕಟ್ಟೆ ಚಾಲಕ-ಮಾಲಕರ ಸಂಘ ಸ್ಥಳೀಯ ಹಲವಾರು ಸಂಘ, ಸಂಸ್ಥೆಗಳ ಜೊತೆಯಲ್ಲಿ ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸಿ ಕೊಂಡು ಬರುತ್ತಿದ್ದಾರೆ.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕುಶಾಲಪ್ಪ ಗೌಡ ಕಲಾಯಿತೊಟ್ಟು, ಪ್ರಧಾನ ಕಾರ್ಯದರ್ಶಿ ಸಿದ್ಧೀಕ್ ಜಿ.ಹೆಚ್, ಸುಣ್ಣಲಡ್ಡ, ಜೊತೆ ಕಾರ್ಯದರ್ಶಿ ಲೋಕಿತ್, ಸಂಘದ ಸದಸ್ಯರಾದ ಗೋಪಾಲ್ ನಾಯ್ಕ್ ಬನ, ವಸಂತ ಶೆಟ್ಟಿ ಮಾವಿನಕಟ್ಟೆ, ರಮೇಶ ಪೂಜಾರಿ ವಂಜಾರೆ, ಶೇಕುಂಞಿ ಸುಣ್ಣಲಡ್ಡ, ಅಬುಬಕ್ಕರ್ ಪದಗೋಳಿ, ಸಂದೀಪ್ ಪೂಜಾರಿ ಪಂಚಮಾಲಕೋಡಿ, ರತ್ನಾಕರ ಪೂಜಾರಿ ಬಳ್ಳಿದಡ್ಡ, ತಾರಾನಾಥ ಪೂಜಾರಿ ಬಳ್ಳಿದಡ್ಡ, ರಕ್ಷಿತ್ ಗೇರುಕಟ್ಟೆ, ಕೀರ್ತಿ ಗೇರುಕಟ್ಟೆ ಉಪಸ್ಥಿತರಿದ್ದರು.

Related posts

ಕೊಕ್ಕಡ: ಶ್ರೀಮತಿ ಮೋನಕ್ಕ ನಿಧನ

Suddi Udaya

ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹುಟ್ಟುಹಬ್ಬ: ನಾಗೇಶ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಕೊಕ್ಕಡ ಎಂಡೋ ಸಲ್ಫಾನ್ ಪಾಲನಾ ಕೇಂದ್ರ ಹಾಗೂ ಕೊಕ್ಕಡ ಅಂಗನವಾಡಿ ಕೇಂದ್ರದಲ್ಲಿ ಆಚರಣೆ

Suddi Udaya

ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಹಕಾರಿ ಕ್ಷೇತ್ರದ ಧುರೀಣ, ಹಿರಿಯರಾದ ಹೆಚ್.ಧರ್ಣಪ್ಪ ಪೂಜಾರಿಯವರಿಗೆ ಸನ್ಮಾನ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿಯ ಸಾಧನೆ

Suddi Udaya

ಕಳಿಯ ಗ್ರಾಮದ ಕೊರಂಜ ನಿವಾಸಿ ಜಯಪ್ರಕಾಶ್ ನಿಧನ

Suddi Udaya

ಬೆಳ್ತಂಗಡಿ: ಮಹಿಳಾ ವೃಂದದಲ್ಲಿ ಝೇಂಕಾರ ಬೇಸಿಗೆ ಶಿಬಿರದ ಉದ್ಘಾಟನೆ

Suddi Udaya
error: Content is protected !!