25.5 C
ಪುತ್ತೂರು, ಬೆಳ್ತಂಗಡಿ
April 24, 2026
ವರದಿಶಿಕ್ಷಣ ಸಂಸ್ಥೆ

ನಯನಾಡು: ಶ್ರೀ ರಾಮ ಭಜನಾ ಮಂದಿರದ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ನಯನಾಡು: ಶ್ರೀ ರಾಮ ಭಜನಾ ಮಂದಿರ ರಿ. ನೈನಾಡು ಇದರ ಸಾರ್ವಜನಿಕ ಗಣೇಶೋತ್ಸವ ಆಚರಣೆಯ ಪ್ರಯುಕ್ತ ಎಲ್‌ಎಂ ಪಿಂಟೋ ಆಸ್ಪತ್ರೆ ಬದ್ಯಾರು ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನೈನಾಡಿನ ಶ್ರೀ ರಾಮ ಸಭಾ ಭವನದಲ್ಲಿ ನಡೆಸಲಾಯಿತು.

ಈ ಶಿಬಿರದಲ್ಲಿ ಜನರಲ್ ತಪಾಸಣೆ, ಇ.ಸಿ.ಜಿ. ಮಕ್ಕಳ ತಜ್ಙರ ವಿಭಾಗ, ಸ್ತ್ರೀ ರೋಗ ಚಿಕಿತ್ಸಾ ವಿಭಾಗ, ಕ್ಯಾನ್ಸರ್ ತಪಾಸಣಾ ವಿಭಾಗ ಗಳ ಪ್ರಯೋಜನವನ್ನು ಸುಮಾರು ೧೬೬ ರಷ್ಟು ಜನರು ಪಡಕೊಂಡಿರುತ್ತಾರೆ. ಬದ್ಯಾರು ಆಸ್ಪತ್ರೆಯ ಖ್ಯಾತ ಕ್ಯಾನ್ಸರ್ ಹಾಗೂ ಶಸ್ತ್ರ ಚಿಕಿತ್ಸಾ ತಜ್ಞರಾದ ಎಲ್ರಾಯ್ ಸಲ್ದಾನ್ಹ ಹಾಗೂ ಆಡಳಿತ ಸಹಾಯಾಧಿಕಾರಿ ಸವಿತಾ, ಭಜನಾ ಮಂದಿರದ ಗೌರವಾಧ್ಯಕ್ಷ ಜಾರಪ್ಪ ಪೂಜಾರಿ, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ರತ್ನಾಕರ್ ರವರುಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವೇದಿಕೆಯಲ್ಲಿ ಶ್ರೀ ರಾಮ ಭಜನಾ ಮಂದಿರ ದ ಗೌರವಾಧ್ಯಕ್ಷ ಜಾರಪ್ಪ ಪೂಜಾರಿ, ಸಂತ ಫ್ರಾನ್ಸಿಸ್ ಅಸಿಸ್ಸಿ ಚರ್ಚ್ ನೈನಾಡು ಇಲ್ಲಿನ ಧರ್ಮಗುರುಗಳಾದ ಅನಿಲ್ ಅವಿಲ್ಡ್ ಲೋಬೋ, ಬದ್ಯಾರು ಆಸ್ಪತ್ರೆ ಯ ಆಡಳಿತಾಧಿಕಾರಿ ಫಾ. ರೋಶನ್ ಕ್ರಾಸ್ತಾ, ತಜ್ಞ ವೈದ್ಯರಾದ ಎಲ್ ರಾಯ್ ಸಲ್ದಾನ, ಆಡಳಿತ ಸಹಾಯಾಧಿಕಾರಿ ಸವಿತಾ, ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ನೆಲ್ವಿಸ್ಟರ್ ಪಿಂಟೋ, ಲೀಲಾವತಿ ಪದ್ಮನಾಭ ಶೆಟ್ಟಿ ಕೆರೆಕೋಡಿ, ಯುವಕ ಸಂಘದ ಕಾರ್ಯದರ್ಶಿ ಗಣೇಶ್ ಹೆಗ್ಡೆ ಮಿತ್ತಬೆಟ್ಟು, ಗೆಳೆಯರ ಬಳಗ ಸೇವಾ ಸಂಸ್ಥೆ ಯ ಪ್ರವೀಣ್ ಕ್ರಾಸ್ತಾ, ಕೆಥೋಲಿಕ್ ಸಭಾದ ನೋಯೆಲ್ ಡಿಸೋಜಾ, ಕೆಥೋಲಿಕ್ ಯುವ ಸಂಚಾಲನದ ಉಪಾಧ್ಯಕ್ಷೆ ಕು. ಕೀರ್ತಿ ಪ್ರೀಯಾ ರೊಡ್ರಿಗಸ್ ಮತ್ತಿತರರು ಉಪಸ್ಥಿತರಿದ್ದರು.

ಆಸ್ಪತ್ರೆಯ ವಿವಿಧ ಸೇವೆಗಳ ಕುರಿತಾಗಿ ಆಡಳಿತ ಕಾರ್ಯ ನಿರ್ವಹಣಾಧಿಕಾರಿ ಸವಿವರವಾದ ಮಾಹಿತಿಯನ್ನು ನೀಡಿದರು. ಖ್ಯಾತ ಸರ್ಜರಿ ಹಾಗೂ ಕ್ಯಾನ್ಸರ್ ಚಿಕಿತ್ಸಾ ತಜ್ಞರಾದ ಎಲ್ ರಾಯ್ ಪಿಂಟೋ ರವರು ಕ್ಯಾನ್ಸರ್ ಕಾಯಿಲೆಯ ಕುರಿತಾದ ಮಾಹಿತಿಯನ್ನು ಪ್ರೋಜೆಕ್ಟರ್ ಚಿತ್ರಗಳ ಮುಖೇನ ಪರಿಣಾಮಕಾರಿಯಾಗಿ ನೀಡಿದರು. ನೈನಾಡು ಚರ್ಚ್ನ ಧರ್ಮಗುರು ಗಳು ಜನರಿಗೆ ಆರೋಗ್ಯದ ಮಹತ್ತರತೆಯನ್ನು, ಹಾಗೂ ಶಿಬಿರದ ಪ್ರಯೋಜನ ಪಡೆಯುವಂತೆ ಹಿತ ನುಡಿಗಲನ್ನಾಡಿದರು.

ಗ್ರಾಮ ಪಂಚಾಯತ್ ಸದಸ್ಯ ನೆಲ್ವಿಸ್ಟರ್ ಜನರಲ್ಲಿ ಸ್ವಚ್ಚತೆಯ ಬಗ್ಗೆ, ಸ್ವಚ್ಛ ಪರಿಸರದೊಂದಿಗೆ ಉತ್ತಮ ಆರೋಗ್ಯ ಪಡೆಯುವಂತೆ ಜನರಲ್ಲಿ ಮನವಿ ಮಾಡಿದರು. ಯುವಕ ಸಂಘ, ಗೆಳೆಯರ ಬಳಗ , ಇನ್ನಿತರ ಸಂಘಟನೆಗಳ ಪ್ರಮುಖರು ಶುಭ ಹಾರೈಸಿದರು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಒಕ್ಕೂಟ ನೈನಾಡು ಇದರ ಅಧ್ಯಕ್ಷೆ ಜಯಲಕ್ಷ್ಮೀ ರಾಘವ ಹೆಗ್ಡೆ, ಹಾಗೂ ನೈನಾಡು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಶೀಂದ್ರ ಶೆಟ್ಟಿ ಅಂಗರ್ಜಾಲು, ನಿವೇದಿತಾ ಮಾತೃ ಮಂಡಳಿ ಯ ಕಾರ್ಯದರ್ಶಿ ದಿವ್ಯಾ ವಿಜಯ್ ರವರು ಉಪಸ್ಥಿತರಿದ್ದರು. ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷರು ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.

Related posts

ಬೆಳಾಲು: ಪೆರಿಯಡ್ಕ ಶಾಲಾ ರಜತ ಮಹೋತ್ಸವ: ಪ್ರವೇಶ ದ್ವಾರ ಲೋಕಾರ್ಪಣೆ- ಸಭಾ ಕಾರ್ಯಕ್ರಮ

Suddi Udaya

ಅಳದಂಗಡಿ: ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಬಡಗಕಾರಂದೂರು ಕಾರ್ಯಕ್ಷೇತ್ರದ ಸಿ.ಎಸ್.ಸಿ. ಕೇಂದ್ರ ಸ್ಥಳಾಂತರ

Suddi Udaya

ನಿಂತಿದ್ದ ಸ್ಕೂಟರಿಗೆ ಆಟೋ ರಿಕ್ಷಾ ಡಿಕ್ಕಿ: ಸ್ಕೂಟರ್ ಸವಾರನಿಗೆ ಗಾಯ

Suddi Udaya

ನಾಳ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭೆ

Suddi Udaya

ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಪ್ರಥಮವಾಗಿ ಆರಂಭ: ಸಿ.ಬಿ.ಜಿ ಘಟಕದ ಲೋಕಾರ್ಪಣೆ

Suddi Udaya

ಅಕ್ರಮವಾಗಿ ಸಾಗಾಟಮಾಡುತ್ತಿದ್ದ ಭಾರೀ ಪ್ರಮಾಣದ ಗಾಂಜಾ ಗೇರುಕಟ್ಟೆಯಲ್ಲಿ ವಶ: ಸ್ಕೂಟರ್ ಸಹಿತ ಇಬ್ಬರು ಆರೋಪಿಗಳ ಬಂಧನ

Suddi Udaya
error: Content is protected !!