25.5 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತರಬೇತಿ ಮೇಲ್ವಿಚಾರಕರಿಂದ ಶ್ರಮ ವಿನಿಮಯ ಮಾಡುತ್ತಿರುವ ಮಾಯ ಕಾರ್ಯಕ್ಷೇತ್ರದ ಎಂಜಿರಿಗಿ ಸಂಘದ ಬೇಟಿ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಇದರ ವಿಸ್ತರಣಾ ಕಾರ್ಯಕ್ರಮನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರ ಮಾರ್ಗದರ್ಶನದಂತೆ ಗ್ರಾಮ ಕಲ್ಯಾಣದ ಕಾರ್ಯಕ್ರಮಗಳನ್ನು ರಾಜ್ಯದ ಬೇರೆ ಬೇರೆ ಗ್ರಾಮಗಳಲ್ಲಿ ಅತ್ಯುತ್ತಮವಾಗಿ ಅನುಷ್ಠಾನ ಮಾಡಲು ನೂತನವಾಗಿ ಆಯ್ಕೆಗೊಂಡ 45 ಜನ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳಿಗೆ ಇದೀಗಾಗಲೇ ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ 15 ದಿನದ ಕ್ಲಾಸ್ ತರಬೇತಿಯನ್ನು ನೀಡಿದ್ದು, ಬೆಳ್ತಂಗಡಿ ತಾಲೂಕಿನ ಮಾಯ ಗ್ರಾಮದ ಎಂಜಿರಿಗಿ ಪ್ರಗತಿಬಂಧು ಸಂಘದ ಭೇಟಿಯನ್ನು ಮಾಡಿ ಸದಸ್ಯರಿಂದ ಅವರ ಅನುಭವ ಹಂಚಿಕೆಯನ್ನು ಸಂವಾದದ ಮೂಲಕವಾಗಿ ಮಾಡಿಕೊಳ್ಳಲಾಯಿತು.

ಸದಸ್ಯರು ತಾನು ಝೀರೋದಿಂದ ಹೀರೋ ಆಗಿರುವ ಎಲ್ಲಾ ತನ್ನ ಅಭಿವೃದ್ಧಿಯ ಪಥವನ್ನು ಬಿಚ್ಚಿಟ್ಟರು, ಒಂದು ಸಮಯದಲ್ಲಿ ತನ್ನಲ್ಲಿ ಜಾಗ ಇದ್ದರೂ ಕೂಡ ಕೂಲಿ ಕೆಲಸವನ್ನು ಮಾಡಿ ಜೀವನ ಮಾಡುತ್ತಿದ್ದ ಈ ಸದಸ್ಯರು ತಾನು ಇದ್ದ ಪೂರ್ತಿ ಜಾಗದಲ್ಲಿ ಕೃಷಿಯನ್ನು ಮಾಡಿ ಉತ್ತಮವಾದ ಆದಾಯವನ್ನು ಪಡೆಯುತ್ತಿದ್ದು ಈಗ ತನ್ನ ಕಾಲ ಮೇಲೆ ನಿಂತು ಅಭಿವೃದ್ಧಿಯ ಬದುಕನ್ನು ಕಟ್ಟಿಕೊಂಡ ಎಲ್ಲ ಪರಿಗಳನ್ನು ವಿವರಿಸಿದರು.

ಈ ಸಂದರ್ಭ ಮಾಯ ಒಕ್ಕೂಟದ ಮಾಜಿ ಅಧ್ಯಕ್ಷರಾದ ಗಂಗಾಧರ ಸಾಲಿಯಾನ್, ಒಕ್ಕೂಟದ ನೂತನ ಅಧ್ಯಕ್ಷರಾದ ಕೃಷ್ಣಪ್ಪ ಗೌಡ, ಸದಸ್ಯರಾದ ಲಕ್ಷ್ಮಣ ಗೌಡ, ಬೆಲಿಯಪ್ಪ ನಾರ್ಣಪ್ಪ ಗೌಡ, ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಉಪನ್ಯಾಸಕರಾದ ಜನಾರ್ದನ, ವಲಯ ಮೇಲ್ವಿಚಾರಕಿಯಾದ ಶ್ರೀಮತಿ ವನಿತಾ, ತಾಲೂಕಿನ ಕೃಷಿ ಅಧಿಕಾರಿಯಾದ ರಾಮ್ ಕುಮಾರ್ ಮಾರ್ನಾಡ್, ಸೇವಾಪ್ರತಿನಿಧಿ ಪ್ರಭಾರವರು ಉಪಸ್ಥಿತರಿದ್ದರು.

Related posts

ಎಸ್.ಡಿ.ಎಂ. ಪಿ.ಯು. ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳಿಂದ ಕೈಗಾರಿಕಾ ಪ್ರದೇಶಗಳಿಗೆ ಭೇಟಿ

Suddi Udaya

ಬೆಳಾಲು: ಮುಕುತ್ತಿ ಮಜಲು ಸೇತುವೆ ನಿರ್ಮಾಣಕ್ಕೆ ಅನುದಾನ ಕಲ್ಪಿಸಿದ ಶಾಸಕ ಹರೀಶ್‌ ಪೂಂಜರಿಗೆ ಅಭಿನಂದನೆ

Suddi Udaya

ಅ.28: ಕುತ್ಲೂರು ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಮಗ್ರ ರಕ್ಷಣಾ ಯೋಜನೆ ಅಪಘಾತ ವಿಮಾ ಮೇಳ’

Suddi Udaya

ಕಲ್ಮಂಜ: ಉಳ್ಳಾಯ ಉಳ್ಳಾಲ್ತಿ ದೈವಸ್ಥಾನ ಪರಾರಿ ಮಜಲ್ ಗುಂಡ ಇದರ ನೂತನ ದೇಗುಲದ ಶಿಲಾನ್ಯಾಸ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ಗ್ರಾಮ ಸಭೆ

Suddi Udaya

ಕಾಶಿಪಟ್ಣ ಕೇಳ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಸಮಾರಂಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ ಕಾಶಿಪಟ್ಣರವರಿಗೆ ಸನ್ಮಾನ

Suddi Udaya
error: Content is protected !!