23.7 C
ಪುತ್ತೂರು, ಬೆಳ್ತಂಗಡಿ
June 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗೇರುಕಟ್ಟೆ ಆಟೋ ಚಾಲಕರ ಸಂಘದ ವತಿಯಿಂದ ಶಿವರಾಮ ಪೂಜಾರಿ ರವರಿಗೆ ಧನಸಹಾಯ

ಬೆಳ್ತಂಗಡಿ : ಕಳಿಯ ಗ್ರಾಮದ ಬೆಳ್ತಂಗಡಿ ಹೂವಿನ ವ್ಯಾಪಾರಿ ಮೇರ್ಲ ಶಿವರಾಮ ಪೂಜಾರಿ ಇತ್ತೀಚಿಗೆ ಅಪಘಾತದಲ್ಲಿ ಗಾಯಗೊಂಡ ಅವರ ಆರೋಗ್ಯ ಚಿಕಿತ್ಸೆಗಾಗಿ ಗೇರುಕಟ್ಟೆ ಸ್ನೇಹ ಸಂಗಮ ಅಟೋ ಚಾಲಕ-ಮಾಲಕರ ಸಂಘದ ವತಿಯಿಂದ ಮನೆಗೆ ಭೇಟಿ ನೀಡಿ ನಗದು ಧನ ಸಹಾಯ ನೀಡಿದರು ಹಾಗೂ ಬೇಗನೆ ಗುಣಮುಖರಾಗಿ ಎಂದು ಸಂಘದ ಸದಸ್ಯರು ಹಾರೈಸಿ ಮಾನವೀಯತೆ ಮೆರೆದರು.


ಮೇ.5 ರಂದು ರಾತ್ರಿ ಮನೆಗೆ ಬರುವಾಗ ಗುರುವಾಯನಕೆರೆ ವಾಹನ ಅಪಘಾತದಲ್ಲಿ ಗಂಭೀರವಾದ ಗಾಯಗೊಂಡರು.
ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚು ಆಗಿದೆ. ಈಗಾಗಲೇ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
ಗೇರುಕಟ್ಟೆ ಚಾಲಕ-ಮಾಲಕರ ಸಂಘ ಸ್ಥಳೀಯ ಹಲವಾರು ಸಂಘ, ಸಂಸ್ಥೆಗಳ ಜೊತೆಯಲ್ಲಿ ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸಿ ಕೊಂಡು ಬರುತ್ತಿದ್ದಾರೆ.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಕುಶಾಲಪ್ಪ ಗೌಡ ಕಲಾಯಿತೊಟ್ಟು, ಪ್ರಧಾನ ಕಾರ್ಯದರ್ಶಿ ಸಿದ್ಧೀಕ್ ಜಿ.ಹೆಚ್, ಸುಣ್ಣಲಡ್ಡ, ಜೊತೆ ಕಾರ್ಯದರ್ಶಿ ಲೋಕಿತ್, ಸಂಘದ ಸದಸ್ಯರಾದ ಗೋಪಾಲ್ ನಾಯ್ಕ್ ಬನ, ವಸಂತ ಶೆಟ್ಟಿ ಮಾವಿನಕಟ್ಟೆ, ರಮೇಶ ಪೂಜಾರಿ ವಂಜಾರೆ, ಶೇಕುಂಞಿ ಸುಣ್ಣಲಡ್ಡ, ಅಬುಬಕ್ಕರ್ ಪದಗೋಳಿ, ಸಂದೀಪ್ ಪೂಜಾರಿ ಪಂಚಮಾಲಕೋಡಿ, ರತ್ನಾಕರ ಪೂಜಾರಿ ಬಳ್ಳಿದಡ್ಡ, ತಾರಾನಾಥ ಪೂಜಾರಿ ಬಳ್ಳಿದಡ್ಡ, ರಕ್ಷಿತ್ ಗೇರುಕಟ್ಟೆ, ಕೀರ್ತಿ ಗೇರುಕಟ್ಟೆ ಉಪಸ್ಥಿತರಿದ್ದರು.

Related posts

ಪಟ್ರಮೆ: ಮಿತ್ತಡ್ಕದಲ್ಲಿ ಸಂಜೀವ ಗೌಡ ರವರ ಮನೆಗೆ ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿ: ಅಪಾರ ಹಾನಿ

Suddi Udaya

ಪೆರ್ಮುಡ ಶ್ರೀ ಜಗದೀಶ್ವರ ಭಜನಾ ಮಂಡಳಿ ಕುಣಿತ ಭಜನಾ ಉದ್ಘಾಟನಾ ಕಾರ್ಯಕ್ರಮ

Suddi Udaya

ಮೇ 22: ಎಕ್ಸೆಲ್ ಅಕ್ಷರೋತ್ಸವ; ರಾಜ್ಯಮಟ್ಟದ ಕವಿಗೋಷ್ಠಿಗೆ ಆಹ್ವಾನ

Suddi Udaya

4ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಉಜಿರೆ ತಂಡಕ್ಕೆ ಹಲವು ಪ್ರಶಸ್ತಿ

Suddi Udaya

ಬೆಳಾಲು ಶ್ರೀ ಧ. ಮಂ. ಪ್ರೌಢಶಾಲೆಯಲ್ಲಿ ಪೋಷಕರ ಸಮಾವೇಶ

Suddi Udaya

ಬಳ್ಳಮಂಜ ನೊರೋಳ್ ಪಲ್ಕೆ ನಿವಾಸಿ ಬಾಬು ಮಲೆಕುಡಿಯ ನಿಧನ

Suddi Udaya
error: Content is protected !!