ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವ ಹೂವಿನ ವ್ಯಾಪಾರಿ ಶಿವರಾಮ್: ಕೆಇಬಿ ಭಾಸ್ಕರ್ ಗುರುಸ್ವಾಮಿ ಇವರ ನೇತೃತ್ವದಲ್ಲಿ ಸಂಗ್ರಹಿಸಿದ ರೂ. 53,011 ವೈದ್ಯಕೀಯ ನೆರವು ಹಸ್ತಾಂತರ

Suddi Udaya

ಬೆಳ್ತಂಗಡಿ: ಇತ್ತಿಚೆಗೆ ಗುರುವಾಯನಕೆರೆಯಲ್ಲಿ ಬಸ್ಸು ಮತ್ತು ಬೈಕ್ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಬೆಳ್ತಂಗಡಿ ಸಂತೆಕಟ್ಟೆ ಹೂವಿನ ವ್ಯಾಪರಿ ಶಿವರಾಮ್ ರವರಿಗೆ ಕೆಇಬಿ ಭಾಸ್ಕರ್ ಗುರುಸ್ವಾಮಿ ಇವರ ನೇತೃತ್ವದಲ್ಲಿ ಸಂಗ್ರಹಿಸಿದ ರೂ 53,011 ವೈದ್ಯಕೀಯ ನೆರವನ್ನು ಶಿವರಾಮ್ ಅವರ ಹೆತ್ತರವರಿಗೆ ಮನೆಯಲ್ಲಿ ಹಸ್ತರಿಸಲಾಯಿತು.

ಶಿವರಾಮ್ ಅವರು ಬೆಳ್ತಂಗಡಿಯಲ್ಲಿ ಹೂವಿನ ವ್ಯಾಪಾರವನ್ನು ನಡೆಸುತ್ತಿದ್ದರು. ಕಳೆದ ಹಲವು ವರ್ಷಗಳಿಂದ ಕೆಇಬಿ ಭಾಸ್ಕರ್ ಗುರುಸ್ವಾಮಿ ಅವರೊಂದಿಗೆ ಶಬರಿಮಲೆ ಅಯ್ಯಪ್ಪ‌ ಸ್ವಾಮಿ ದರ್ಶನ ಮಾಡಿಕೊಂಡು ಬರುತ್ತಿದ್ದರು.

ಈ ಸಂದರ್ಭದಲ್ಲಿ ಸಂತೋಷ್ ಕಟ್ಟೆ, ಮಂಜುನಾಥ್ ಉಜಿರೆ , ಜಗನ್ನಾಥ್, ಶಿವರಾಂ ಚಂದ ಸ್ಟೋರ್ ಬೆಳ್ತಂಗಡಿ , ಭಾಸ್ಕರ್, ಸಚಿನ್ ಹುಣ್ಸೆಕಟ್ಟೆ, ಹರೀಶ್ ಆಚಾರ್ಯ, ಪ್ರವೀಣ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.

Leave a Comment

error: Content is protected !!